ಜ್ಞಾನದೀವಿಗೆಗೆ ಟೊಯೋಟಾ ಕಂಪನಿಯಿಂದ 10 ಲಕ್ಷ ರೂ. ದೇಣಿಗೆ

ಬೆಂಗಳೂರು: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಅಭಿಯಾನಕ್ಕೆ ಈಗಲೂ ದೇಣಿಗೆ  ಹರಿಬರುತ್ತಿದೆ. ಜಪಾನ್ ಮೂಲದ ಟೊಯೋಟಾ ಕಂಪನಿ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದೆ.

ಇಂದು ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿದ ಟೊಯೋಟಾ ಬೊಶೋಕು ಕಂಪನಿಯ ಮುಖ್ಯಸ್ಥ ತಿತ್ಸೂಯಾ ಸುಗಿಸಾಕಿ ಮತ್ತು ಸಂಸ್ಥೆ ಎಂಡಿ ಮೋರಿ ಮಸಾಹಿಕೋ ಅವರು 10 ಲಕ್ಷ ರೂಪಾಯಿ ಮೊತ್ತದ ಚೆಕ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಿತ್ಸೂಯಾ ಸುಗಿಸಾಕಿ ಪಬ್ಲಿಕ್ ಟಿವಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕಳೆದ ಹಲವು ವರ್ಷಗಳಿಂದಲೂ ಟೊಯೋಟಾ ಕಂಪನಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.

Comments

Leave a Reply

Your email address will not be published. Required fields are marked *