ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ-2,35,000 ನಗದು ಸಹಿತ 8 ಜನ ಅರೆಸ್ಟ್

ಹಾವೇರಿ: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಬಂಧಿಸಿ, ಅವರ ಬಳಿ ಇದ್ದು 2,25,000 ರೂಪಾಯಿ ಹಣವನ್ನು ವಶಪಡೆಸಿಕೊಂಡ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಬಳಿ ನಡೆದಿದೆ.

ಬಂಧಿತರನ್ನು ಅನ್ವರ್ ಚಿತ್ತೆವಾಲೆ, ಜಂದಿಸಾಬ ಬಳ್ಳಾರಿ, ಪ್ರಕಾಶ್ ಮಲ್ಲಿಗೆರೆ, ಮೊಹಮ್ಮದ್‍ರಫೀ ಧಾರವಾಡ, ಗುರುಪ್ರಸಾದ್ ಪವಾಡಿ ಶೆಟ್ಟಿ, ಸುಮೀತ್ ಮಲ್ಲಾಪುರ, ಮಂಜುನಾಥ್ ಸುಣಗಾರ ಮತ್ತು ಗೋವಿಂದ ವಡ್ಡರ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಮಂಜುನಾಥ್ ಯಳ್ಳೂರ ಎಂಬಾತ ಪರಾರಿಯಾಗಿದ್ದಾನೆ.

ಬಂಧಿತ ಆರೋಪಿಗಳೆಲ್ಲರೂ ಬೇರೆ ಬೇರೆ ಕಡೆಗಳಿಂದ ಬಂದು ಗ್ರಾಮದ ಆಂಜನೇಯ ದೇವಸ್ಥಾನ ಬಳಿ ಇರುವ ಸಾರ್ವಜನಿಕ ರಸ್ತೆ ಮೇಲೆ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರು ಕಾರು, ನಾಲ್ಕು ಬೈಕ್ ಮತ್ತು 2,35,000 ರೂಪಾಯಿಗೂ ಅಧಿಕ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಪಿಐ ಶಿವಶಂಕರ್ ಗಣಾಚಾರಿ ನೇತೃತ್ವದಲ್ಲಿ ಪಿಎಸ್‍ಐ ಶ್ರೀಶೈಲ ಪಟ್ಟಣಶೆಟ್ಟಿ ದಾಳಿ ಮಾಡಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Comments

Leave a Reply

Your email address will not be published. Required fields are marked *