ಜಿರಳೆ ಕಾಟದಿಂದ ವಿಚ್ಚೇದನಕ್ಕೆ ಮುಂದಾದ ದಂಪತಿ

ಭೋಪಾಲ್: ತಮ್ಮ ನಡುವೆ ಸಾಮರಸ್ಯ ಇಲ್ಲದೆ, ತುಂಬಾ ಜಗಳಗಳು ಆದಾಗ ದಂಪತಿ ವಿಚ್ಛೇದನಕ್ಕೆ ಮುಂದಾಗುವುದನ್ನು ನೋಡಿದ್ದೇವೆ. ಆದರೆ ಮನೆಯಲ್ಲಿ ಜಿರಳೆ ಕಾಟ ಎಂಬ ಕಾರಣಕ್ಕೆ ಡಿವೋರ್ಸ್ ಕೇಳಿರುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಈ ದಂಪತಿ ಮದುವೆಯಾಗಿ ಮೂರು ವರ್ಷ ಕಳೆದಿತ್ತು. ಅಷ್ಟರಲ್ಲಾಗಲೇ 18 ಬಾರಿ ಮನೆಯನ್ನು ಬದಲಾಯಿಸಿದ್ದರು. ಯಾಕೆಂದ್ರೆ ಪತ್ನಿಗೆ ಜಿರಳೆ ಅಂದರೆ ಭಯ ಹೀಗಾಗಿ ದಂಪತಿ ಮನೆಯನ್ನು ಬದಲಾಯಿಸುತ್ತಲೇ ಇದ್ದರು.

ಮದುವೆ ನಂತರ ಅಡುಗೆ ಮಾಡಲು ಕಿಚನ್‍ಗೆ ಹೋದಾಗ ಅಲ್ಲಿ ಇರುವ ಜಿರಳೆಗಳನ್ನು ಕಂಡು ಮಹಿಳೆ ಜೋರಾಗಿ ಕಿರುಚಿತ್ತಾ ಓಡಿ ಬಂದಿದ್ದಳು. ನಾನು ಜಿರಳೆ ಇದ್ದರೆ ಅಡುಗೆ ಮನೆಗೆ ಹೋಗುವುದಿಲ್ಲ ಎಂದು ಪತಿಯ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ದಂಪತಿ ಒಂದಾದರ ಮೇಲೋಂದು ಮನೆಯನ್ನು ಬದಲಾಯಿಸುತ್ತಲೇ ಇದ್ದರು.

 

ಈ ವಿಚಾರವಾಗಿ ಬೇಸರಗೊಂಡ ಪತಿ ತನ್ನ ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾನೆ. ವೈದ್ಯರ ಬಳಿ ಹೋಗಿ ಪತ್ನಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾನೆ. ಆದರೆ ಏನು ಪ್ರಯೋಜನವಾಗದೇ ಇದ್ದಾಗ ವಿಚ್ಛೇದನ ಕೊಡಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *