ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

ಯಾದಗಿರಿ: ಸರ್ಕಾರ ಕೊಟ್ಟ ಜಮೀನಿನಲ್ಲಿ ಉಳುಮೆ ಮಾಡಲು ಪಕ್ಕದ ಜಮೀನಿನ ಮಾಲೀಕರು ಬಿಡದ ಕಾರಣ, ನೊಂದ ಕುಟುಂಬವೊಂದು ಜಮೀನು ಕೊಡಿಸಿ ಇಲ್ಲವೇ ವಿಷ ಕೊಡಿ ಎಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಗೆ ಮುಂದಾಗಿದೆ.

ಜಿಲ್ಲೆಯ ಶಹಾಪುರ್ ತಾಲೂಕಿನ ಹೊಸಕೇರ ಬಾಂಗ್ಲಾ ತಾಂಡಾದಲ್ಲಿ ಕಳೆದ ಇಪ್ಪತ್ತು ವರ್ಷದ ಹಿಂದೆ ಸರ್ಕಾರದ ಜಮೀನನ್ನು ಟೋಪುನಾಯಕ ಎಂಬುವರರಿಗೆ ಕೊಡಲಾಗಿತ್ತು. ಜೊತೆಗೆ ಹಕ್ಕು ಪತ್ರವನ್ನು ಕೂಡ ನೀಡಲಾಗಿತ್ತು. ಆದರೆ ಆ ವೇಳೆಯಲ್ಲಿ ಜಮೀನಿಗೆ ಸರ್ವೆ ಮಾಡದ ಕಾರಣ, ಟೋಪುನಾಯಕ ಕುಟುಂಬಕ್ಕೆ ಜಮೀನಿನಲ್ಲಿ ಉಳುಮೆ ಮಾಡಲು ಪ್ರತಿ ವರ್ಷ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ -ದಂಧೆಕೋರ ಅಂದರ್

ಟೋಪುನಾಯಕ ಕುಟುಂಬ ಎರಡು ವರ್ಷಗಳಿಂದ ಸರ್ವೆ ಮಾಡಿ ಕೊಡಿ ಎಂದು ಶಹಾಪುರ್ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಟೋಪು ನಾಯಕ ಅವರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೆ ಇದೀಗ ತಮ್ಮ ಜಾಗದ ಹಕ್ಕುಪತ್ರವನ್ನು ಪಕ್ಕದ ಜಮೀನಿನ ಮರೆಪ್ಪ ಪಟೇಲರಿಗೆ ನೀಡಲಾಗಿದೆ ಎಂದು ಸಂತ್ರಸ್ತ ಟೋಪುನಾಯಕ ಅವರು ಆರೋಪಿಸಿ ಧರಣಿಗೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *