ಜನತಾ ಕರ್ಫ್ಯೂಗೆ ಕಡಲನಗರಿಯಲ್ಲಿ ಉತ್ತಮ ಸ್ಪಂದನೆ

ಮಂಗಳೂರು: ಜನತಾ ಕರ್ಫ್ಯೂಗೆ ರಾಜ್ಯದ ಕರಾವಳಿಯ ಜನ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಬೆಳಗ್ಗೆ 10 ಗಂಟೆಯವರೆಗೆ ಕೆಲವೊಂದು ಅಗತ್ಯ ವಸ್ತುಗಳಿಗಾಗಿ ಕೆಲ ಜನ ಓಡಾಟ ನಡೆಸಿದ್ರು. ಬಳಿಕ ಎಲ್ಲರೂ ಮನೆಯೊಳಗೆ ಲಾಕ್ ಆಗಿದ್ರು. ಹೀಗಾಗಿ ಮಂಗಳೂರು ಸಂಪೂರ್ಣ ಸ್ತಬ್ಧವಾಗಿದೆ.

ನಗರದ ಸುಮಾರು 54 ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಿದ್ದು ಸುಮಾರು ಒಂದು ಸಾವಿರ ಪೊಲೀಸರು ಕಾರ್ಯಾಚರಣೆ ನಡೆಸಿದ್ರು. ಪ್ರತೀ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಅನಗತ್ಯ ವಾಹನಗಳು ಓಡಾಟ ನಡೆಸಿದ್ರೆ ಅಂತಹ ವಾಹನಗಳನ್ನು ಸೀಜ್ ಮಾಡಲಾಗಿದೆ.

ಸದಾ ಜನರಿಂದ ತುಂಬಿರುತ್ತಿದ್ದ ಎಂ.ಜಿ.ರೋಡ್, ಲಾಲ್ ಭಾಗ್, ಪಿವಿಎಸ್, ಕ್ಲಾಕ್ ಟವರ್, ಸ್ಟೇಟ್ ಬ್ಯಾಂಕ್ ಸರ್ಕಲ್, ಕಂಕನಾಡಿ, ಪಂಪ್ ವೆಲ್ ಸೇರಿದಂತೆ ಎಲ್ಲೆಡೆ ಜನ ಸಂಚಾರವಿಲ್ಲದೆ ಸ್ತಬ್ಧವಾಗಿದೆ.

Comments

Leave a Reply

Your email address will not be published. Required fields are marked *