ಜಗಳ ಆಡ್ತಿದ್ದ ಪತ್ನಿಯನ್ನ ಕೊಂದು ಬೆಂಕಿ ಹಚ್ಚಿದ

– ಹೆಂಡ್ತಿ ಕಾಣ್ತಿಲ್ಲ ಎಂದು ದೂರು ಸಲ್ಲಿಸಿದ

ಹೈದರಾಬಾದ್: ನಶೆಯಲ್ಲಿ ಪತ್ನಿಯನ್ನ ಕೊಲೆಗೈದು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದ ಪತಿಯನ್ನು ಬಂಧಿಸಲಾಗಿದೆ. ವಿಕಾರಬಾದ್ ಜಿಲ್ಲೆಯ ಅನಂತಗಿರಿಯಲ್ಲಿ ಘಟನೆ ನಡೆದಿದೆ.

27 ವರ್ಷದ ಸಂತೋಷಿ ಪತಿ ಪ್ರಭುನಿಂದ ಕೊಲೆಯಾದ ಮಹಿಳೆ. ಸಂತೋಷಿ ಮತ್ತು ಪ್ರಭು ಮದುವೆ 2007ರಲ್ಲಿ ಆಗಿತ್ತು. ದಂಪತಿಗೆ ನಾಲ್ಕು ಮಕ್ಕಳು ಸಹ ಇವೆ. ಮೃತ ಸಂತೋಷಿ ಪ್ರತಿನಿತ್ಯ ಪತಿ ಜೊತೆ ಜಗಳ ಮಾಡುತ್ತಿದ್ದಳು. ನವೆಂಬರ್ 5ರಂದು ಪ್ರಭು ಮದ್ಯ ಸೇವಿಸಿ ಬಂದಾಗ ಸಂತೋಷಿ ಗಲಾಟೆ ಮಾಡಿದ್ದಾಳೆ.

ಈ ವೇಳೆ ಕೋಪಗೊಂಡ ಪ್ರಭು ಪತ್ನಿಯನ್ನು ಹೊಡೆದು ಕೊಂದಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ರವಾನಿಸಿ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ತದನಂತರ ಪತ್ನಿ ಕಾಣೆಯಾಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಣ್ಣೀರಿಟ್ಟಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಪ್ರಭು ಮೇಲೆ ಸಂಶಯ ಬಂದಿದೆ. ವಿಚಾರಣೆಗಾಗಿ ಕರೆಸಿಕೊಂಡು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಪ್ರಭು ತಪ್ಪೊಪ್ಪಿಕೊಂಡಿದ್ದಾನೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆಯೂ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Comments

Leave a Reply

Your email address will not be published. Required fields are marked *