ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸುಧಾಕರ್ ಚಾಲನೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿಯಲ್ಲಿ ಇಂದು ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಸಚಿವ ಸಿಸಿ ಪಾಟೀಲ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಮಂಡಳಿಯ ಅಧ್ಯಕ್ಷ ಜೈರಾಜ್, ಹಿರಿಯ ನಿರ್ಮಾಪಕ ಸಾರಾ ಗೋವಿಂದು, ಹಿರಿಯ ನಟಿ ತಾರಾ ಅನೂರಾಧ ಉಪಸ್ಥಿತರಿದ್ದರು.

ಚಿತ್ರೋದ್ಯಮದ ಕಲಾವಿದರು ಮತ್ತು ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಡಾ.ಸುಧಾಕರ್ ಮಾತನಾಡಿ, ಕೊವಿಡ್ ನಷ್ಟ ಎಲ್ಲಾ ಉದ್ಯಮಕ್ಕೂ ಆಗಿದೆ. ಚಲನಚಿತ್ರಕ್ಕೆ ಬಹಳಷ್ಟು ನಷ್ಟ ಆಗಿದೆ ಅಂತಾ ಅಭಿಪ್ರಾಯ ಪಡೆದಿದ್ದೇನೆ. ಕೊರೊನಾ ಯೋಧರು ಅಂತಾ ನಮ್ಮನ್ನು ಆ ಸಾಲಿನಲ್ಲಿ ಸೇರಿಸಬೇಕು ಅಂತಾ ಹೇಳಿದ್ರು. ಹಾಗಾಗಿ ಚಲನಚಿತ್ರದ ಕಾರ್ಮಿರನ್ನ ಕೊರೊನಾ ಯೋಧರು ಅಂತಾ ಈಗಾಗಲೇ ಆದೇಶ ಮಾಡಿದ್ದೇವೆ ಎಂದರು.

ನನಗೆ ಪೂರ್ಣ ವಿಶ್ವಾಸ ಇದೆ. ಈ ವರ್ಷದ ಕೊನೆಯಲ್ಲಿ ಎಲ್ಲರಿಗೂ ಲಸಿಕೆ ಕೊಡ್ತೆವೆ ಅಂತಾ ಸುಮಾರು 10 ಕೋಟಿ ಲಸಿಕೆ ಕೊಡಬೇಕಾಗುತ್ತೆ. ಜುಲೈನಲ್ಲಿ ಬರುತ್ತೆ ಆಕ್ಟೋಬರ್ ನಿಂದ ಡಿಸೆಂಬರ್ ಒಳಗಡೆ ಲಸಿಕೆ ಕೊಡುವ ಗುರಿ ಇಟ್ಟಿಕೊಂಡಿದೆ. ಪ್ರಧಾನಿಗಳು ಲಸಿಕೆ ಕೊಡೋದಾಗಿ ಹೇಳಿದ್ದಾರೆ. ಅದರ ಪ್ರಯೋಜನ ಪಡೆದುಕೊಳ್ಳೋಣ ಅಂದರು.

ಇನ್ನೂ ಲಸಿಕೆ ಬಗ್ಗೆ ತಪ್ಪು ಗ್ರಹಿಕೆ ಜನರಲ್ಲಿ ಇದ್ದರೆ ಜನರಿಗೆ ತಿಳಿ ಹೇಳುವುದುರ ಮೂಲಕ ತಪ್ಪು ಗ್ರಹಿಕೆಯನ್ನ ದೂರ ಮಾಡುವುದರಲ್ಲಿ ಚಲನಚಿತ್ರ ನಟರು ಭಾಗಿಯಾಗಬೇಕು ಅಂತಾ ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *