ಗೆಳತಿಯರ ಜೊತೆ ಗಲಾಟೆ – ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕರು

– ಬಾಲಕಿಯರ ವಿರುದ್ಧ ದೂರು ನೀಡಿದ ಹುಡುಗನ ತಂದೆ
– ಮಾತನಾಡುವಾಗ ವಾಗ್ವಾದ ನಡೆದು ಘಟನೆ

ಲಕ್ನೋ: ತಮ್ಮ ಸ್ನೇಹಿತೆಯರೊಂದಿಗೆ ಜಗಳವಾಗಿದ್ದಕ್ಕೆ ಕೋಪಗೊಂಡು ಇಬ್ಬರು ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮುವಾದ ರಾಣಿಪುರದಲ್ಲಿ ಘಟನೆ ನಡೆದಿದ್ದು, 11ನೇ ತರಗತಿ ಪ್ರವೇಶಕ್ಕಾಗಿ ತೆರಳಿದಾಗ ಬಾಲಕರು ಈ ರೀತಿ ಮಾಡಿಕೊಂಡಿದ್ದಾರೆ. ಇಬ್ಬರು ಹುಡುಗಿಯರು ರಾಣಿಪುರದವರಾಗಿದ್ದು, ಸಾವನ್ನಪ್ಪಿದ ಬಾಲಕರನ್ನು ವಿಶಾಲ್(17) ಗುಪ್ತಾ ಹಾಗೂ ಬಿತ್ತು(18) ಎಂದು ಗುರುತಿಸಲಾಗಿದೆ.

ವಿಶಾಲ್ ಗುಪ್ತಾ ಖಂದೇರಾಯ್‍ಪುರ ಗ್ರಾಮದ ರಾಮಲೀಲಾ ಮೈದಾನದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಿತ್ತು ಸಹ ಅದೇ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ನಂತರ ವಾರಾಣಸಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸಾವನ್ನಪ್ಪಿದ್ದಾನೆ. ಇದೇ ವೇಳೆ ವಿಶಾಲ್ ತಂದೆ ರಾಣಿಪುರ ಪೊಲೀಸ್ ಠಾಣೆಗೆ ತೆರಳಿ ಇಬ್ಬರು ಹುಡುಗಿಯರ ವಿರುದ್ಧ ದೂರು ನೀಡಿದ್ದಾರೆ.

ವಿಶಾಲ್ ನಗ್ರಾ ಪ್ರದೇಶದ ಲಖಿಸರಿಯಾ ಗ್ರಾಮದವನಾಗಿದ್ದು, ಬಿತ್ತು ಸಿಕಂದರ್‍ಪುರದ ಮುದಿಯಾರ್‍ಪುರ ಗ್ರಾಮದವನಾಗಿದ್ದಾನೆ. 11ನೇ ತರಗತಿಗೆ ಪ್ರವೇಶಕ್ಕಾಗಿ ಇಬ್ಬರೂ ಮನೆಯಿಂದ ಹೊರಟಿದ್ದಾರೆ. ನಂತರ ಇಬ್ಬರೂ ತಮ್ಮ ಸ್ನೇಹಿತೆಯರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಅವರನ್ನು ಭೇಟಿಯಾಗಲು ಊರಿಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಹುಡುಗಿಯರು ರಾಮಲೀಲಾ ಮೈದಾನದ ಬಳಿ ಹುಡುಗರನ್ನು ಭೇಟಿಯಾಗಿದ್ದು, ನಂತರ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರೂ ಬಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *