ಗೃಹಿಣಿ ಆತ್ಮಹತ್ಯೆ – ಡೈರಿ, ಪತಿ ಮೊಬೈಲ್ ವಶಕ್ಕೆ ಪಡೆದ ಪೊಲೀಸರು

ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಜರುಗಿದೆ.

ಗೃಹಿಣಿಯನ್ನು ತ್ರಿವೇಣಿ ಎಂದು ಗುರುತಿಸಲಾಗಿದೆ. ಈಕೆಗೆ ಕಳೆದ ಒಂದು ವರ್ಷದ ಹಿಂದೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಿಂದ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಗ್ರಾಮದ ರಾಜೇಂದ್ರನೊಂದಿಗೆ ವಿವಾಹವಾಗಿತ್ತು.

ವರದಕ್ಷಿಣೆ ವಿಚಾರವಾಗಿ ತನಗೆ ಪ್ರತಿನಿತ್ಯ ಗಂಡ ಸೇರಿದಂತೆ ಮನೆಯವರೆಲ್ಲರೂ ಕಿರುಕುಳ ನಿಡುತ್ತಿದ್ದರು ಎಂದು ನಮ್ಮ ಮಗಳು ತ್ರಿವೇಣಿ ಕೆಲದಿನಗಳ ಹಿಂದೆ ನಮಗೆ ತಿಳಿಸಿದ್ದಳು ಎಂದು ಗೃಹಿಣಿ ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ ತ್ರಿವೇಣಿಯ ಪತಿ ರಾಜೇಂದ್ರ ಹಾಗೂ ಈತನ ಮನೆಯವರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತಿ ದಿನ ಹೇಗೆ ನಡೆದು ಕೊಳ್ಳುತ್ತಿದ್ದರು, ಹೇಗೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಡೈರಿಯನ್ನು ಹಾಗೂ ಪತಿ ರಾಜೇಂದ್ರನ ಮೊಬೈಲ್ ಅನ್ನು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಪೊಲೀಸರು ಸೀಜ್ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *