ಗುಣಮುಖ ಪ್ರಮಾಣ ಹೆಚ್ಚಳ – ಇಂದು 5,778 ಹೊಸ ಕೊರೊನಾ ಪ್ರಕರಣ

– ಇಂದು ರಾಜ್ಯದಲ್ಲಿ 13,550 ಮಂದಿ ಡಿಸ್ಚಾರ್ಜ್

ಬೆಂಗಳೂರು: ಕಳೆದ ಒಂದು ವಾರದಿಂದ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, ರಾಜ್ಯದಲ್ಲಿಂದು 5,778 ಹೊಸ ಪ್ರಕರಣಗಳು ವರದಿಯಾಗಿವೆ. ಇಂದು ಕೊರೊನಾಗೆ 74 ಸೋಂಕಿತರು ಸಾವನ್ನಪ್ಪಿದ್ದು, 13,550 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7,88,551ಕ್ಕೆ ಏರಿಕೆಯಾಗಿದ್ದು, 92,927 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ರಾಜ್ಯದಲ್ಲಿ 10,770 ಸೋಂಕಿತರು ಸಾವನ್ನಪ್ಪಿದ್ದು, 940 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 5.38% ಮತ್ತು ಮರಣ ಪ್ರಮಾಣ 1.28% ಇದೆ. ಇಂದು ರಾಜ್ಯದಲ್ಲಿ 1,07,354 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 59, ಬಳ್ಳಾರಿ 218, ಬೆಳಗಾವಿ 61, ಬೆಂಗಳೂರು ಗ್ರಾಮಾಂತರ 280, ಬೆಂಗಳೂರು ನಗರ 2,807, ಬೀದರ್ 6, ಚಾಮರಾಜನಗರ 29, ಚಿಕ್ಕಬಳ್ಳಾಪುರ 237, ಚಿಕ್ಕಮಗಳೂರು 80, ಚಿತ್ರದುರ್ಗ 79, ದಕ್ಷಿಣ ಕನ್ನಡ 154, ದಾವಣಗೆರೆ 58, ಧಾರವಾಡ 133, ಗದಗ 37, ಹಾಸನ 95, ಹಾವೇರಿ 97, ಕಲಬುರಗಿ 55, ಕೊಡಗು 49, ಕೋಲಾರ 52, ಕೊಪ್ಪಳ 49, ಮಂಡ್ಯ 191, ಮೈಸೂರು 308, ರಾಯಚೂರು 31, ರಾಮನಗರ 16, ಶಿವಮೊಗ್ಗ 93, ತುಮಕೂರು 184, ಉಡುಪಿ 141, ಉತ್ತರ ಕನ್ನಡ 60, ವಿಜಯಪುರ 83 ಮತ್ತು ಯಾದಗಿರಿಯಲ್ಲಿ 36 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಅಕ್ಟೋಬರ್ 15ರಿಂದ ಇಂದು ಸತತ 8ನೇ ದಿನ ರಾಜ್ಯದಲ್ಲಿ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿದೆ. ಇಂದು ರಾಜ್ಯಾದ್ಯಂತ ಒಟ್ಟು 1,07,354 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವುಗಳಲ್ಲಿ 86,501 ಅಂದರೆ ಶೇ.80 ಕ್ಕಿಂತ ಹೆಚ್ಚು ಟೆಸ್ಟ್ ಗಳು ಆರ್ ಟಿ-ಪಿಸಿಆರ್ ಪರೀಕ್ಷೆಗಳಾಗಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *