ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

ಪಾಟ್ನಾ: ಆಟವಾಡುತ್ತಿದ್ದ ಬಾಲಕಿ ಮನೆಯಂಗಳದಲ್ಲಿದ್ದ ಗಿಡವನ್ನು ಕಿತ್ತುಳು ಎಂದು ಸಿಟ್ಟಿಗೆದ್ದ ಒಂದು ಕುಟುಂಬ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

ಹಲ್ಲೆಗೊಳಗಾದ ಬಾಲಕಿ 12 ವರ್ಷದವಳಾಗಿದ್ದಾಳೆ. ಸಿಖಂದರ್ ಯಾದವ್ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಈತ ಸಿವರಾಣ ಗ್ರಾಮದ ನಿವಾಸಿಯಾಗಿದ್ದಾನೆ.

12 ವರ್ಷದ ಬಾಲಕಿ ಸಿಖಂದರ್ ಯಾದವ್ ಎನ್ನುವರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕೆ ತಿಳಿಯದೆ ಮನೆಯ ಅಂಗಳದಲ್ಲಿದ್ದ ಒಂದು ಗಿಡವನ್ನು ಕಿತ್ತಿದ್ದಾಳೆ. ಇದನ್ನು ಗಮನಿಸಿದ ಸಿಖಂದರ್ ಮತ್ತು ಆತನ ಪತ್ನಿ, ಮಗಳು ಸೇರಿ ಬಾಲಕಿಗೆ ಹೊಡೆದು ಹಿಂಸೆ ಮಾಡಿದ್ದಾರೆ.

ಬಾಲಕಿ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಸಿಖಂದರ್ ಯಾದವ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *