ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

ಗದಗ: ಗಾಳಿಪಟದ ದಾರ ಸಿಲುಕಿ ವ್ಯಕ್ತಿಯೋರ್ವನ ಕೈ ಬೆರಳು ಹಾಗೂ ಕುತ್ತಿಗೆಗೆ ಗಾಯವಾದ ಘಟನೆ ನಗರದ ಟಾಂಗಾ ಕೂಟ ಬಳಿ ನಡೆದಿದೆ. ಕಾರಹುಣ್ಣಿಮೆ ನಿಮಿತ್ತ ಮಕ್ಕಳು, ಯುವಕರು ಗಾಳಿಪಟ ಹಾರಿಸುವುದೇ ಒಂದು ಸಂಭ್ರಮ. ಇಂದು ಸಾಕಷ್ಟು ಬ್ರಹತ್ ಗಾತ್ರದ ಬಣ್ಣ ಬಣ್ಣದ ಪಟಗಳು ಬಾನಂಗಳದಲ್ಲಿ ಹಾರಾಡುತ್ತವೆ. ಅನೇಕ ಪಟಗಳು ಹರಿದು ಎಲ್ಲಂದರಲ್ಲಿ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿಸುತ್ತಿವೆ.

ಇಂದು ಸಹ ಗಾಳಿಪಟವೊಂದು ಹರಿದು ವೇಗವಾಗಿ ಬಂದಿದೆ. ಅದನ್ನು ಗಮನಿಸದ ಬೈಕ್ ಸವಾರನ ಕೈ ಹಾಗೂ ಕುತ್ತಿಗೆಗೆ ಏಕಾಏಕಿ ದಾರ ಸಿಲುಕಿದೆ. ಪ್ಲಾಸ್ಟಿಕ್ ಹಾಗೂ ಗಾಜಿನ ಪುಡಿ ಮಿಶ್ರಿತದಿಂದ ತಯಾರಿಸಿದ ದಾರ ಇದಾಗಿದೆ. ಜೋರಾಗಿ ಎಳೆದುಕೊಂಡಿದ್ದರಿಂದ ಕೈ ಬೆರಳು ಹಾಗೂ ಕತ್ತು ಹರಿದು ನೆತ್ತರು ನೆಲಕ್ಕೆ ಚಿಮ್ಮಿದೆ.

ಗಾಯಾಳು ವ್ಯಕ್ತಿ ಬೈಕ್ ನಿಂದ ಕೆಳಗೆ ಬಿದ್ದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಎಬ್ಬಿಸಿದ್ದಾರೆ. ನಂತರ ಕೈ ಹಾಗೂ ಕೊರಳಿಗೆ ಸಿಲುಕಿದ ದಾರಿ ಬೀಡಿಸಿದ್ದಾರೆ. ಸಾಕಷ್ಟು ರಕ್ತ ಹರಿಯುತ್ತಿರುವುದರಿಂದ ಕೈ ತೊಳೆದು, ಬಟ್ಟೆಕಟ್ಟಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ್ರು.

ಗಾಳಿಪಟದ ಮಾಂಜಾ ದಾರದಿಂದಾಗಿ ಮನುಷ್ಯರಷ್ಟೆ ಅಲ್ಲದೇ ಪ್ರಾಣಿ ಪಕ್ಷಿಗಳ ಜೀವ ಹಾನಿಗೊಳಗಾಗುತ್ತಿವೆ. ಪ್ಲಾಸ್ಟಿಕ್ ಹಾಗೂ ಗಾಜಿನ ಪುಡಿ ಮಿಶ್ರಣದಿಂದ ತಯಾರಿಸಿದ ಪಟದ ಮಾಂಜಾ ಬಳಕೆ ಬಂದ್ ಮಾಡಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *