ಗಡಿಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಗೌರವ

ಬೆಂಗಳೂರು: ಕಾಶ್ಮೀರದ ಪುಲ್ವಾಮ ದಾಳಿ, ಮಹಾರಾಷ್ಟ್ರ, ಮಥುರಾ, ಕಾರ್ಗಿಲ್ ಮುಂತಾದ ನಾನಾ ಕಡೆ ಸತತವಾಗಿ 17 ವರ್ಷ ನಿರಂತರವಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಇಂದು ತನ್ನ ಹುಟ್ಟೂರಿಗೆ ಮರಳಿದ ಯೋಧನಿಗೆ, ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಅದ್ದೂರಿ ಸ್ವಾಗತ ಮಾಡಿದ್ದಾರೆ.

ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯ ಯೋಧ ಶಿವಕುಮಾರ್. ಸತತ 17 ವರ್ಷ ದೇಶಕ್ಕಾಗಿ ದುಡಿದು ಇಂದು ನಿವೃತ್ತಿ ಹೊಂದಿ ತವರೂರಿಗೆ ಆಗಮಿಸಿದರು. ಯೋಧನ ಆಗಮನವಾಗುತ್ತಿದ್ದಂತೆ ಸ್ನೇಹಿತ ಬಳಗ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಹೂಮಾಲೆ ಹಾಕಿ ಆರತಿ ಬೆಳಗಿ ಅರಿಶಿನಕುಂಟೆಯಿಂದ ನೆಲಮಂಗಲದವರೆಗೂ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ಯೋಧನಿಗೆ ಅಭಿನಂದಿಸಿದರು.

ಮೆರವಣಿಗೆ ವೇಳೆ ರಸ್ತೆಯುದ್ದಕ್ಕೂ ವಂದೇ ಮಾತರಂ ಜೈಕಾರ, ಬೈಕ್ ರ್ಯಾಲಿ ಮೂಲಕ ತವರಿಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ನಿವೃತ್ತ ಯೋಧ ಶಿವಕುಮಾರ್ ದೇಶಕ್ಕೆ ಅವಶ್ಯಕತೆ ಬಿದ್ದಾಗ ದೇಶ ಕಾಯೋ ಸೈನಿಕನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೆ ಹೋಗಿ ಕೆಲಸ ಮಾಡಿ ಅಂತ ಯುವಕರಿಗೆ ಕರೆ ನೀಡಿದರು.

Comments

Leave a Reply

Your email address will not be published. Required fields are marked *