ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದಲೇ ಅಣ್ಣನ ಕೊಲೆ

ಹಾಸನ: ಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ರವಿ (47) ಎಂದು ಗುರುತಿಸಲಾಗಿದೆ. ಕಡೂರು ಮೂಲದ ರವಿ ಕಾಫಿ ಪ್ಲಾಂಟರ್ ಸುದೀಶ್ ಎಂಬವವರ ತೋಟದಲ್ಲಿ ಕಾಫಿ ಕುಯ್ಲು ಮಾಡಲು ಹೋಗಿದ್ದು, ಈ ವೇಳೆ ಕಾಫಿ ಬೀಜ ಕುಯ್ಲು ಮಾಡಲು ಚಿಕ್ಕಪ್ಪನ ಮಗ ಪ್ರದೀಪ್(29)ನನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ.

ನಿನ್ನೆ ಇಬ್ಬರು ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಂದು ನಾನ್ ವೆಜ್ ಅಡುಗೆ ಮಾಡಿ ಊಟ ಮುಗಿಸಿದ ನಂತರ ರವಿ ಜಗಳ ಆರಂಭಿಸಿದ್ದಾನೆ. ನಾನೇ ಅಡುಗೆ ಪದಾರ್ಥಗಳನ್ನೆಲ್ಲಾ ತಂದಿದ್ದೀನಿ, ನೀನು ರಾಗಿಹಿಟ್ಟನ್ನು ಕೂಡ ತಂದಿಲ್ಲ ಎಂದು ಬಾಯಿಗೆ ಬಂದಂತೆ ಬೈದು ಪ್ರದೀಪ್‍ನನ್ನು ಮನೆಯಿಂದ ಹೊರಹಾಕಿದ್ದಾನೆ. ರವಿ ಪಾತ್ರೆಗಳನ್ನೆಲ್ಲಾ ಸಹೋದರನ ಮೇಲೆ ಎಸೆದು ಹಲ್ಲೆಗೆ ಮುಂದಾಗಿದ್ದಾನೆ.

ಇದರಿಂದ ಕೋಪಗೊಂಡ ಪ್ರದೀಪ್ ಕೋಣೆಯೊಳಗೆ ಹೋಗಿ ದೊಣ್ಣೆಯಿಂದ ರವಿ ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿ ಶವದ ಪಕ್ಕದಲ್ಲಿಯೇ ಕುಳಿತಿದ್ದಾನೆ. ಇಂದು ಬೆಳಗ್ಗೆ ತೋಟದ ಮಾಲೀಕ ಇಬ್ಬರನ್ನು ಕೆಲಸಕ್ಕೆ ಕರೆಯಲು ಬಂದಾಗ ಕೊಲೆ ನಡೆದಿರುವುದು ವಿಚಾರ ತಿಳಿದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿ ಪ್ರದೀಪ್ ನನ್ನು ಬಂಧಿಸಿದ್ದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.

Comments

Leave a Reply

Your email address will not be published. Required fields are marked *