ಕ್ವಾರಂಟೈನ್ ನೆಪ ಹೇಳಿರೋ ಹೆಚ್‍ಡಿಕೆಗೆ ಕೋರ್ಟ್ ಚಾಟಿ – ಪ್ರಚಾರಕ್ಕೆ ಹೋದ್ರೆ ಅರೆಸ್ಟ್ ವಾರೆಂಟ್

ಬೆಂಗಳೂರು: ಹಲಗೆ-ವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೈರು ಹಾಜರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಗರಂ ಆಗಿದ್ದಾರೆ.

ಖುದ್ದು ಹಾಜರಿಗೆ ಸೂಚಿಸಿದರೂ, ಹೋಂ ಕ್ವಾರಂಟೈನ್ ಕಾರಣ ನೀಡಿ ಕುಮಾರಸ್ವಾಮಿ ಇಂದಿನ ವಿಚಾರಣೆಗೆ ಗೈರು ಹಾಜರಾಗಿದ್ರು. ಇದರಿಂದ ಸಿಟ್ಟಾದ ನ್ಯಾಯಾಧೀಶರು, ಮುಂದಿನ ವಿಚಾರಣೆ ನಡೆಯುವ ಏಪ್ರಿಲ್ 17ರವರೆಗೆ ಕುಮಾರಸ್ವಾಮಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಬಾರದು. ನಾನು ಮನೆಗೆ ಹೋಗಿ ಟಿವಿ ನೋಡುತ್ತೇನೆ, ಪತ್ರಿಕೆ ಓದುತ್ತೇನೆ. ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತೇನೆ. ಎಲ್ಲಾದ್ರೂ ಕುಮಾರಸ್ವಾಮಿ ಕಾಣಿಸಿಕೊಂಡ್ರೇ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಖುದ್ದು ಹಾಜರಿಗೆ ಸಮನ್ಸ್ ನೀಡಿದ್ರೂ ಅವರು ಗೈರಾಗಿದ್ದಾರೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ವಾ? ಗೌರವ ಕೊಡುವುದು ಬೇಡ್ವಾ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ರು. ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ ಹಿನ್ನೆಲೆ ಹೆಚ್‍ಡಿಕೆ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಕೋರ್ಟ್‍ಗೆ ವಕೀಲರು ಮಾಹಿತಿ ನೀಡಿದ್ರು. ಕೋರ್ಟ್‍ನ ಈ ಆದೇಶದಿಂದಾಗಿ ಉಪ ಚುನಾವಣೆಯ ಪ್ರಚಾರದಿಂದ ಹೆಚ್‍ಡಿಕೆ ದೂರ ಉಳಿಯಬೇಕಾಗುತ್ತದೆ.

Comments

Leave a Reply

Your email address will not be published. Required fields are marked *