ಕೋವಿಡ್ ಸೋಂಕಿತರ ಮೇಲೆ ಕಲ್ಲು ತೂರಾಟ – ಮಾನವೀಯತೆ ಮರೆತು ಕ್ರೌರ್ಯ ಮೆರೆದ ಜನ

ಬೆಂಗಳೂರು: ಮಾನವೀಯತೆ ಮರೆತು ಕೋವಿಡ್ ಸೋಂಕಿತರ ಮೇಲೆ ಸ್ಥಳೀಯ ಜನರು ಕ್ರೌರ್ಯ ಮೆರೆದು ಕಲ್ಲು ತೂರಾಟ ನಡೆಸಿರುವ ಘಟನೆ ಮಾಗಡಿ ತಾಲೂಕಿನ ಕುದೂರಿನಲ್ಲಿ ನಡೆದಿದೆ.

ಸೋಂಕಿತರ ಮೇಲೆ ನೇರವಾಗಿ ಕಲ್ಲು ತೂರಾಟ ನಡೆದಿರುವುದು ಇಂದಿನ ಸಮಾಜವನ್ನು ಅಣಕಿಸುವಂತಿದೆ. ಕುದೂರಿನ ಸರ್ಕಾರಿ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದು, ಇಲ್ಲಿ ಸುಮಾರು 52 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರು ವಾಯು ವಿಹಾರ ಮಾಡುತ್ತಿದ್ದ ವೇಳೆ ಅಲ್ಲಿನ ಸ್ಥಳೀಯರು ಕಲ್ಲನ್ನು ಎಸೆದು ವಾಯು ವಿಹಾರ ಮಾಡಬೇಡಿ ಎಂದು ಹಲ್ಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಕುದೂರು ಗ್ರಾಮ ಪಂಚಾಯತಿ ಸದಸ್ಯೆ ಪತಿಯಿಂದಲೂ ಕಲ್ಲು ತೂರಾಟವಾಗಿದೆ ಎನ್ನಲಾಗಿದ್ದು, ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Comments

Leave a Reply

Your email address will not be published. Required fields are marked *