ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿಯವರ ಸಾಥ್

– ಎರಡೂವರೆ ಕೋಟಿ ರೂ. ಆಮ್ಲಜನಕ ಸಾಂದ್ರಕ ನೆರವು

ತುಮಕೂರು: ಕೋವಿಡ್ ಸೋಂಕಿತರ ಚಿಕಿತ್ಸೆಯ ನೆರವಿಗೆ ಖಾಸಗಿ ಉದ್ಯಮಿಗಳು ಸಾಥ್ ನೀಡಿದ್ದಾರೆ. ಸುಮಾರು 2.25 ಕೋಟಿ ರೂಪಾಯಿಯ 300 ಆಕ್ಸಿಜನ್ ಕಾನ್ಸನ್ ಟ್ರೇಟರ್ ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ್ದಾರೆ.

ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್, ಕ್ರಷರ್ ಅಸೋಸಿಯೇಶನ್, ರೈಸ್ ಮಿಲ್ ಅಸೋಸಿಯೇಷನ್ ನಿಂದ ದೇಣಿಗೆ ಸಂಗ್ರಹಿಸಿ ಸಾಂದ್ರಕವನ್ನು ನೀಡಲಾಗಿದೆ.

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಹಲವು ರೋಗಿಗಳು ಸಾವನ್ನಪ್ಪಿದ್ರು. ಇದನ್ನು ಮನಗಂಡಿದ್ದ ಉಸ್ತುವಾರಿ ಸಚಿವ ಮಾಧುಸ್ವಾಮಿ ಉದ್ಯಮಿಗಳ ಸಭೆ ಕರೆದು ಸಹಾಯ ಕೇಳಿದ್ರು. ಅದರಂತೆ ಇಂದು 300 ಆಕ್ಸಿಜನ್ ಕಾನ್ಸನ್ ಟ್ರೇಟರ್ ಹಸ್ತಾಂತರ ಮಾಡಿದ್ದಾರೆ.

ಇನ್ನೊಂದೆಡೆ ಸೋಂಕಿತರ ನೆರವಿಗಾಗಿ ಸಮಾಜ ಸೇವಕ ಗೋವಿಂದರಾಜು ಎರಡು ಅಂಬ್ಯುಲೆನ್ಸ್ ಗಳು ಉಚಿತ ಸೇವೆಗೆಗಾಗಿ ಬಿಟ್ಟಿದ್ದಾರೆ. ಇದರ ಜೊತೆಗೆ ಉಚಿತ ಆಹಾರ ಕಿಟ್ ಕೂಡ ವಿತರಿಸಿದ್ದಾರೆ. ಸಹಾಯವಾಣಿ ನಂಬರ್ ಅಂಬ್ಯಲೆನ್ಸ್ ಮೇಲೆ ಹಾಕಲಾಗಿದೆ. ಸಹಾಯ ಅವಶ್ಯಕತೆ ಇದ್ದವರು ಕರೆ ಮಾಡಬಹುದಾಗಿದೆ.

Comments

Leave a Reply

Your email address will not be published. Required fields are marked *