ಕೋವಿಡ್ ವ್ಯಾಕ್ಸಿನ್ ಪಡೆಯೋಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರಿಗರ ವಲಸೆ

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಅಭಾವದ ಹಿನ್ನೆಲೆ ಹತ್ತಿರದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೂರಾರು ಮಂದಿ ಬೆಂಗಳೂರಿಗರು ಕೋವಿಡ್ ವ್ಯಾಕ್ಸಿನೇಷನ್ ಪಡೆಯೋಕೆ ವಲಸೆ ಬರುತ್ತಿರುವುದರ ಬಗ್ಗೆ ವರದಿಯಾಗಿದೆ.


ರಾಜ್ಯದಲ್ಲಿ 18 ವರ್ಷದಿಂದ 45 ವರ್ಷದೊಳಗಿನವರೆಗೆ ವ್ಯಾಕ್ಸಿನೇಷನ್ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಆದರೆ ವ್ಯಾಕ್ಸಿನೇಷನ್ ಪಡೆದುಕೊಳ್ಳುವವರು ಮೊದಲು ಕೋವಿನ್ ಆ್ಯಪ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡಿರಬೇಕು. ಅವರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗುತ್ತದೆ. ಸ್ವಯಂಪ್ರೇರಿತರಾಗಿ ಲಸಿಕಾಕರಣ ಕೇಂದ್ರಕ್ಕೆ ಬಂದವರಿಗೆ ವ್ಯಾಕ್ಸಿನೇಷನ್ ಕೊಡಲ್ಲ. ಇದೇ ಬೆಂಗಳೂರಿಗರಿಗೆ ಅನುಕೂಲಕರವಾಗುತ್ತಿದ್ದು, ಬೆಂಗಳೂರಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯ ಅಲಭ್ಯತೆ ಹಿನ್ನೆಲೆ ಅಕ್ಕಪಕ್ಕದ ಹತ್ತಿರದ ಜಿಲ್ಲೆಗಳಿಗೆ ಬೆಂಗಳೂರಿಗರು ಲಗ್ಗೆ ಇಡುತ್ತಿದ್ದಾರೆ.

ಕೋವಿನ್ ಆ್ಯಪ್‍ನಲ್ಲಿ ಎಲ್ಲಿ ಲಸಿಕೆ ಲಭ್ಯತೆ ಇರುತ್ತದೆಯೋ ಅಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಳ್ಳಬಹುದು. ಹೀಗಾಗಿ ಬೆಂಗಳೂರಿಗರು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹಾಗಾಗಿ ಬೆಳಗ್ಗಿನಿಂದಲೂ ನೂರಾರು ಮಂದಿ ಆಗಮಿಸಿ ಲಸಿಕೆ ಪಡೆದುಕೊಂಡು ಹೋಗುತ್ತಿದ್ದಾರೆ.

ಬೆಂಗಳೂರಿಗರಿಗೆ ಲಸಿಕೆ ಸ್ಥಳೀಯರ ಆಕ್ರೋಶ
ಇತ್ತ ಬೆಂಗಳೂರಿಗರೇ ಬಂದು ಲಸಿಕೆ ಪಡೆದುಕೊಂಡು ಹೋದರೆ ನಮಗೆ ಲಸಿಕೆ ಸಿಗಲ್ಲ. ನೀವು ಯಾಕೆ ಇಲ್ಲಿ ಬರ್ತೀರಾ ಎಂದು ಸ್ಥಳೀಯ ಜನ ಬೆಂಗಳೂರಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಧಿಕಾರಿಗಳ ಗಳನ್ನು ತರಾಟೆಗೆ ತೆಗೆದುಕೊಂಡು ಬೆಂಗಳೂರಿಂದ ಬಂದವರು ಇಲ್ಲಿ ವ್ಯಾಕ್ಸಿನೇಷನ್ ಯಾಕೆ ಪಡೀತಾರೆ. ಬಂದವರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ವ್ಯಾಕ್ಸಿನ್ ಪಡೆಯೋಕೆ ನಾ ಮುಂದು ತಾ ಮುಂದು ಅಂತ ಮುಗಿಬೀಳ್ತಿದ್ದಾರೆ.

ಇನ್ನೂ ಬೆಂಗಳೂರಿನಿಂದ ವ್ಯಾಕ್ಸಿನ್ ಪಡೆಯಲು ಬರುವವರು ಬೆಂಗಳೂರಿಂದ ಬಂದು ಮತ್ತೆ ಇಲ್ಲಿ ಕೊರೊನಾ ಸ್ಪ್ರೆಡ್ ಮಾಡಿದರೆ ಯಾರು ಹೊಣೆ? ಅವರಿಗೆ ಕೋವಿಡ್ ಟೆಸ್ಟ್ ಮಾಡದೆ ಜಿಲ್ಲೆಗೆ ಪ್ರವೇಶ ಕೊಡುತ್ತಿದ್ದೀರಿ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಮತ್ತೊಂದೆಡೆ ಲಾಕ್ ಡೌನ್ ಅಂತರ್ ಜಿಲ್ಲಾ ಒಡಾಟಕ್ಕೆ ನಿರ್ಬಂಧ ಇದ್ರೂ ಬೆಂಗಳೂರಿಗರು ತಮ್ಮ ಸ್ವಂತ ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರ್ತೀರೋದು ಹೇಗೆ ಅನ್ನೋ ಪ್ರಶ್ನೆ ಎತ್ತಿದ್ದಾರೆ.

Comments

Leave a Reply

Your email address will not be published. Required fields are marked *