ಕೋವಿಡ್‌ ನಿಯಮ ಪಾಲಿಸಿ, ಮಾದರಿಯಾಗೋಣ – ದೆಹಲಿಯಲ್ಲೇ ಅಂಗಡಿ ಅಂತ್ಯಕ್ರಿಯೆ

ನವದೆಹಲಿ: ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿಯವರ ಅಂತ್ಯಕ್ರಿಯೆ ಇಂದು ಸಂಜೆ ದೆಹಲಿಯ ದ್ವಾರಕಾ ಸೆಕ್ಟರ್ 24 ರಲ್ಲಿರುವ ಲಿಂಗಾಯತ ರುದ್ರ ಭೂಮಿಯಲ್ಲಿ ನಡೆಯಲಿದೆ.

ಅಂಗಡಿಯವರ ಮೃತದೇಹವನ್ನು ಬೆಳಗಾವಿಗೆ ಕೊಂಡೊಯ್ಯಲು ಕುಟುಂಬ ವರ್ಗ ಮನವಿ ಮಾಡಿತ್ತು. ರಾಜ್ಯ ಸರ್ಕಾರ ಮತ್ತು ಏರ್ ಇಂಡಿಯಾ ಸಮ್ಮತಿ ಸೂಚಿಸಿದ್ದರೂ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು.

ಕೊರೋನಾ ಸೊಂಕಿತರಾಗಿರುವುದರಿಂದ ನಾವೇ ನಿಯಮಗಳನ್ನು ಉಲ್ಲಂಘನೆ ಮಾಡುವುದು ಬೇಡ. ನಿಯಮಗಳನ್ನು ಪಾಲಿಸಿ ಮಾದರಿಯಾಗುವಂತೆ ಕೇಂದ್ರ ನಾಯಕರು ಅಂಗಡಿ ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.

ಸುರೇಶ ಅಂಗಡಿ ಅವರ ಹಿರಿಯ ಪುತ್ರಿ ಡಾಕ್ಟರ್ ಸ್ಮೃತಿ ದೆಹಲಿ ಪ್ರಯಾಣ ಮಾಡಬೇಕಾದ ಹಿನ್ನಲೆಯಲ್ಲಿ ಸಂಜೆ 4-5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಮುಂಜಾನೆ ಮುಂಬೈ ಮೂಲಕ ದೆಹಲಿಗೆ ಪುತ್ರಿ ತೆರಳಿದ್ದಾರೆ. ಬೆಳಗಾವಿ, ಬೆಂಗಳೂರಿಂದ ಕುಟುಂಬದ ಆಪ್ತ ಸದಸ್ಯರು ದೆಹಲಿಗೆ ಬರುತ್ತಿದ್ದಾರೆ.

Comments

Leave a Reply

Your email address will not be published. Required fields are marked *