ಕೊರೊನಾ ಹೋಗಿಲ್ಲ, ಲಸಿಕೆ ಸಿಕ್ಕಿಲ್ಲ, ನಿರ್ಲಕ್ಯ ಬೇಡ: ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರ ನಿರ್ಲಕ್ಷ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮೌನ ಮುರಿದಿದ್ದು, ಕೊರೊನಾ ಇನ್ನೂ ಹೋಗಿಲ್ಲ, ಲಸಿಕೆ ಕೂಡ ಸಿಕ್ಕಿಲ್ಲ ಎಚ್ಚರ ತಪ್ಪಬೇಡಿ ಎಂದು ಮನವಿ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮಧ್ಯ ಪ್ರದೇಶದ ಫಲಾನುಭವಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿ ಪ್ರಧಾನಿ ಮೋದಿ ಘೋಷ ವಾಕ್ಯಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ಲಸಿಕೆ ಸಿಗುವ ವರೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಘೋಷ ವಾಕ್ಯಗಳನ್ನು ಉಲ್ಲೇಖಿಸಿರುವ ಅವರು, ‘ಎಲ್ಲಿಯವರೆಗೆ ಲಸಿಕೆ ಇಲ್ಲವೋ ಅಲ್ಲಿಯವರೆಗೆ ಸಡಿಲಿಕೆ ಇಲ್ಲ’ ಎಂದು ಹೇಳಿದ್ದಾರೆ. ಮತ್ತೊಂದರಲ್ಲಿ ದೋ ಗಜ್ ಕಿ ದೂರಿ, ಮಾಸ್ಕ್ ಹೈ ಜರೂರಿ (ಎರಡು ಗಜಕ್ಕಿಂತ ದೂರ ಚಲಿಸಿದರೆ ಮಾಸ್ಕ್ ಕಡ್ಡಾಯ) ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೊನಾದಿಂದ ಗುಣಮುಖಗೊಳ್ಳುವವರ ಪ್ರಮಾಣ ಶೇ.77.77 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 81,533 ಮಂದಿ ಚೇತರಿಕೆ ಕಂಡಿದ್ದು, ಇದು ಒಂದೇ ದಿನದಲ್ಲಿ ಗುಣಮುಖಗೊಂಡವರ ಗರಿಷ್ಠ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಒಂದು ಕಡೆ ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದ್ದು, ಸಾವು ಸಂಭವಿಸುತ್ತಿವೆ. ಮತ್ತೊಂದು ಕಡೆ ಚೇತರಿಕೆ ಪ್ರಮಾಣವೂ ಕೂಡಾ ಹೆಚ್ಚಾಗಿದೆ. ಈ ಮೂರು ವಲಯಗಳಲ್ಲಿ ಐದು ರಾಜ್ಯಗಳು ಪ್ರಮುಖ ಪಾತ್ರ ನಿರ್ವಹಿಸಿವೆ. ಈವರೆಗೂ ದೇಶದಲ್ಲಿ 36,24,196 ಮಂದಿ ಗುಣಮುಖವಾಗಿದ್ದು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಶೇ.60 ಮಂದಿ ಚೇತರಿಕೆ ಕಂಡಿದ್ದಾರೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,570 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಈ ಐದು ರಾಜ್ಯದ ಶೇ.60 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿಯಲ್ಲಿ ಶೇ.69 ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments

Leave a Reply

Your email address will not be published. Required fields are marked *