ಕೊರೊನಾ ನಿಗ್ರಹಕ್ಕೆ ಉದ್ಯಮಿಗಳಿಂದ ಸಣ್ಣ ಕೈಗಾರಿಕೆಗಳಿಗೆ ನೆರವು

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದ ವಿವಿಧ ಸಣ್ಣ ಕೈಗಾರಿಕೆಗಳಿಗೆ ವಿವಿಧ ಉದ್ಯಮಿಗಳಿಂದ ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸ್ಟ್ಯಾಂಡ್ ಮುಂತಾದ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು.

ಈ ವೇಳೆ ಕಾಸಿಯಾ ಅಧ್ಯಕ್ಷ ಅರಸಪ್ಪ ಕೆ.ಬಿ.ಮಾತನಾಡಿ, ಈ ಕೊರೊನಾ ಸಂದರ್ಭದಲ್ಲಿ ಕೆಲವು ಸಣ್ಣ ಕೈಗಾರಿಕೆಗಳಿಗೆ ಭೇಟಿ ನೀಡಿ ಅವರಿಗೆ ತೊಂದರೆ ಆದ ಕಾರಣ ಕೆಲವು ದಾನಿಗಳಿಂದ ಸಹಾಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ನೀಡಲಿದ್ದೇವೆ. ನಮ್ಮ ಕೈಗಾರಿಕೆಗಳಲ್ಲಿ ಇದುವರೆಗೂ ಒಂದೂ ಪಾಸಿಟಿವ್ ಕೇಸ್ ಬಂದಿಲ್ಲ. ಈಗ ನೂರರಷ್ಟು ಕೆಲಸ ನಡೆಯುತ್ತಿಲ್ಲ ಜನರು ಊರುಗಳಿಗೆ ಹೋಗಿದ್ದಾರೆ ಮತ್ತೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರತಿ ವಾರಕ್ಕೊಮ್ಮೆ ಕಂಪನಿಗೆ ಸ್ಯಾನಿ ಟೈಸ್ ಮಾಡಲಾಗುತ್ತಿದ್ದು, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಬರದಂತೆ ತಡೆದರೆ ಮತ್ತೆ ಕಂಪನಿಗಳಿಗೆ ಕೆಲಸಕ್ಕೆ ಬರಬಹುದು ಎನ್ನುವ ಉದ್ದೇಶ ನಮ್ಮದು ಎಂದರು.

ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಆಸ್ರಣ್ಣ ಮಾತನಾಡಿ, ಈ ಭಾಗದ ಕೆಲವು ಉದ್ಯಮಿಗಳು ಸಣ್ಣ ಕೈಗಾರಿಕೆಗಳಿಗೆ ಕೊರೊನಾ ನಿಗ್ರಹಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತಿದ್ದಾರೆ ಇದು ಒಳ್ಳೆಯ ಸಂಗತಿ ಎಂದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಮಲ್ಲೇಶ್ ಗೌಡ, ಮಂಜುನಾಥ್, ಗಿರೀಶ್ ಗೌಡ್ರು ಮುಂತಾದವರು ಇದ್ದರು.

Comments

Leave a Reply

Your email address will not be published. Required fields are marked *