ಕೊರೊನಾ ಎಫೆಕ್ಟ್- ಅಂತಾರಾಜ್ಯ ಗಡಿಯಲ್ಲಿ ಜೋಡಿಯ ಮದ್ವೆ

– ಜೋಡಿಯ ‘ಗಡಿ’ಬಿಡಿಯ ಕಲ್ಯಾಣ

ತಿರುವನಂತಪುರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜೋಡಿಯೊಂದು ಎರಡು ರಾಜ್ಯಗಳ ಗಡಿಯಲ್ಲಿಯೇ ಭಾನುವಾರ ಮದುವೆಯಾಗಿದೆ.

ರಾಬಿನ್ಸನ್ ಮತ್ತು ಪ್ರಿಯಾಂಕ ಗಡಿಯಲ್ಲಿ ಮದುವೆಯಾದ ಜೋಡಿ. ಇಬ್ಬರ ಮದುವೆ ಮಾರ್ಚ್ 22ರಂದು ಗುರುಹಿರಿಯರು ನಿಶ್ಚಯಿಸಿದ್ದರು. ಮಾರ್ಚ್ 21ರಂದು ಜನತಾ ಕರ್ಫ್ಯೂ  ಹಿನ್ನೆಲೆ ಮದುವೆ ಮುಂದೂಡಲಾಗಿತ್ತು. ತದನಂತರ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಮದುವೆ ದಿನಾಂಕವನ್ನು ಎರಡು ಕುಟುಂಬಗಳು ಮುಂದೂಡತ್ತಲೇ ಬಂದಿದ್ದವು.

ಪ್ರಿಯಾಂಕ ಕೇರಳದವರಾಗಿದ್ದು, ರಾಬಿನ್ಸನ್ ತಮಿಳುನಾನ ನಿವಾಸಿ. ಅನ್‍ಲಾಕ್ ಘೋಷಣೆ ಬಳಿಕ ಪ್ರಿಯಾಂಕ ತಮಿಳುನಾಡಿನ ಗಡಿವರೆಗೆ ಬರುವ ಪಾಸ್ ಪಡೆದುಕೊಂಡಿದ್ದರು. ಇತ್ತ ರಾಬಿನ್ಸನ್ ಸಹ ಕೇರಳದ ಗಡಿವರೆಗೆ ಬರಲು ಪ್ರಯಾಣದ ಪಾಸ್ ಪಡೆದಿದ್ದರು. ಎರಡೂ ರಾಜ್ಯಗಳನ್ನು ಸಂಪರ್ಕಿಸುವ ಚಿನ್ನಾರ್ ಸೇತುವೆಯಲ್ಲಿ ಕಲ್ಯಾಣ ನಡೆದಿದೆ. ಎರಡು ಕುಟುಂಬದವರು ಸೇರಿ ಕೇವಲ 12 ಮಂದಿ ಕಲ್ಯಾಣಕ್ಕೆ ಹಾಜರಾಗಿದ್ದರು. ಜೊತೆಗೆ ಅರಣ್ಯಾಧಿಕಾರಿಗಳು, ಪೊಲೀಸರು ಮತ್ತು ಮಾಜಿ ಶಾಸಕ ಎ.ಕೆ.ಮಣಿ ಉಪಸ್ಥಿತರಿದ್ದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಯಾರ ಮನೆಗೆ ಬರುವಂತಿರಲಿಲ್ಲ. ಮದುವೆಗಾಗಿ ಜೋಡಿಯ ಎರಡೂ ಕುಟುಂಬಗಳು ಸ್ಥಳೀಯ ಅಧಿಕಾರಿಗಳಲ್ಲಿ ಅನುಮತಿಯನ್ನ ಕೇಳಿದ್ದವು. ಆದ್ರೆ ಎಲ್ಲರಿಗೂ ಪ್ರಯಾಣದ ಅನುಮತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜೋಡಿ ಕುಟುಂಬಸ್ಥರು ಮತ್ತು ಸ್ಥಳೀಯ ಪೊಲೀಸರ ಸಮ್ಮತಿಯ ಮೇರೆ ಗಡಿಭಾಗದಲ್ಲಿಯೇ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ದೇವಿಕುಲಂ ಕ್ಷೇತ್ರದ ಮಾಜಿ ಶಾಸಕ ಎ.ಕೆ.ಮಣಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *