ಕೊರೊನಾಗೆ ಬಲಿ – ಕ್ರೈಸ್ತ ಧರ್ಮದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಹಿರಿಯರ ಅಡ್ಡಿ

ಹುಬ್ಬಳ್ಳಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕ್ರೈಸ್ತ ಧರ್ಮದ ಕೆಲ ಹಿರಿಯರು ಅಡ್ಡಿ ಪಡಿಸಿದ  ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ರೈಲ್ವೇ ಆಸ್ಪತ್ರೆಗೆ ದಾಖಲಾಗಿದ್ದ ಮಂಟೂರು ರಸ್ತೆ ನಿವಾಸಿ‌ ನೀರೆಲ್ಲಾ ಸುಲೋಮನ್ (85) ಇಂದು ಬೆಳಗ್ಗೆ 4 ಗಂಟೆಗೆ ಮೃತಪಟ್ಟಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಕೊರೋನಾದಿಂದ ಮೃತರಾಗಿದ್ದರೂ ಇನ್ನೂ ಆಸ್ಪತ್ರೆಯಲ್ಲೇ ಮೃತದೇಹವಿದೆ. ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ಮತ್ತು ಸ್ನೇಹಿತರು ತೀರ್ಮಾನ ಮಾಡಿದ್ದರು. ಆದರೆ ಕ್ರೈಸ್ತ ಧರ್ಮದ ಕೆಲ ಹಿರಿಯರು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಸ್ಮಶಾನದಲ್ಲಿ ಮಾಡುವುದು ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಅಂತ್ಯಕ್ರಿಯೆ ನಡೆಸುವ ಜಾಗ ಎಲ್ಲಿ ಎನ್ನುವುದು ಇತ್ಯರ್ಥವಾಗದ ಕಾರಣ ಸ್ನೇಹಿತರು ಮತ್ತು ಸಂಬಂಧಿಕರು ಸುಲೋಮನ್ ಶವಕ್ಕಾಗಿ ಬೆಳಗ್ಗೆಯಿಂದ ಆಸ್ಪತ್ರೆ ಮುಂದೆ ನಿಂತುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *