ಕೊರೊನಾದಿಂದ ತಂದೆ,ತಾಯಿ ಕಳೆದುಕೊಂಡಿದ್ದ ಮಗು – ನೆರವು ನೀಡಿದ ರೈತ ಮುಖಂಡ

ಚಾಮರಾಜನಗರ: ಕೊರೊನಾದಿಂದ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದ್ದ ಮಗುವಿಗೆ ರೈತ ಮುಖಂಡ ಮಲ್ಲೇಶ್ ಅವರು ನೆರವನ್ನು ನೀಡಿದ್ದಾರೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಗುರು ಪ್ರಸಾದ್, ರಶ್ಮಿ ಕೋವಿಡ್ ನಿಂದ ಸಾವನ್ನಪ್ಪಿದರು. ಅನಾಥ ಮಗು ಇದೀಗ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುತ್ತಿದೆ.

ಮಗುವಿನ ಪೋಷಣೆ, ಭವಿಷ್ಯದ ದೃಷ್ಟಿಯಿಂದ ಚಾಮರಾಜನಗರದ ರೈತ ಮುಖಂಡ ಮಲ್ಲೇಶ್ 50 ಸಾವಿರ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ. ಮಲ್ಲೇಶ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *