ಕೊಡಗಿನಲ್ಲಿ ಮತ್ತೆ ಸುರಿದ ಆಲಿಕಲ್ಲು ಮಳೆ

ಮಡಿಕೇರಿ: ಹವಾಮಾನ ವೈಪರೀತ್ಯ ಹಿನ್ನೆಲೆ ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ, ನೆಮ್ಮಲೆ ಸೇರಿದಂತೆ ವಿವಿಧೆಡೆ ಇಂದು ಸಂಜೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ.

ಬಿರುಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ. ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗು, ಅಡಿಕೆ, ಬಾಳೆ ತೋಟ ಹಾಗೂ ಕರಿಮೆಣಸು ಗಿಡಗಳು ಹಾಳಾಗಿವೆ. ಆಲಿಕಲ್ಲು ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗಾರರು ಹಾಗೂ ರೈತರ ಆತಂಕ ಹೆಚ್ಚಿಸಿದ್ದು, ಬೆಳೆದ ಬೆಳೆಗಳು ಮತ್ತೆ ನಷ್ಟವಾಗುವ ಅತಂಕದಲ್ಲಿದ್ದಾರೆ.

ಕಳೆದ ಫೆಬ್ರವರಿ 12ರಂದು ಇದೇ ರೀತಿ ಸೋಮವಾರಪೇಟೆ ತಾಲೂಕಿನ ಕೋಡ್ಲಿಪೇಟೆ ಭಾಗದ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾಗಿತ್ತು. ಆಗ ಸಹ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಇಂದು ಸಹ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.

Comments

Leave a Reply

Your email address will not be published. Required fields are marked *