ಕೇರಳದ ಆರೋಗ್ಯ ಮಂತ್ರಿಯನ್ನು ‘ಕೋವಿಡ್ ರಾಣಿ’ ಎಂದ ಕಾಂಗ್ರೆಸ್ ಮುಖಂಡ

– ಕ್ಷಮೆ ಕೇಳುವಂತೆ ಆಗ್ರಹ

ತಿರುವನಂತಪುರ: ಕೇರಳದ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್ ವಿವಾದಾತ್ಮಹ ಹೇಳಿಕೆ ನೀಡಿದ್ದು, ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಎಂ.ರಾಮಚಂದ್ರನ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಎಂ.ರಾಮಚಂದ್ರನ್ ಹೇಳಿಕೆಯನ್ನು ಖಂಡಿಸಿರುವ ಸಿಪಿಐ(ಎಂ) ಲಿಂಗ ಅಸಮಾನತೆಯಿಂದ ಕೂಡಿದೆ. ಹಾಗಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಈ ಹಿಂದೆ ರಾಮಚಂದ್ರನ್, ನಿಫಾ ವೈರಸ್ ವೇಳೆಯೂ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ ನಲ್ಲಿ ‘ಅತಿಥಿ ಕಲಾವಿಧೆ’ ಆಗಿದ್ದರು. ನಿಫಾ ರಾಜಕುಮಾರಿ ಆಗಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಈ ಕುರಿತು ಪ್ರತಿಕ್ರಿಯಸಿದ್ದು, ಕೇರಳದ ಕೆಪಿಸಿಸಿ ಅಧ್ಯಕ್ಷರು ಆರೋಗ್ಯ ಮಂತ್ರಿ ಶೈಲಜಾ ಅವರನ್ನು ನಿಫಾ ರಾಜಕುಮಾರಿ ಮತ್ತು ಕೋವಿಡ್ ರಾಣಿ ಮಾಡಲು ಹೊರಟಿದ್ದಾರೆ. ಒಬ್ಬ ನಾಯಕ ಇಷ್ಟು ಕೆಳ ಮಟ್ಟಕ್ಕೆ ಇಳಿಯಲು ಸಾಧ್ಯನಾ? ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ಸರ್ಕಾರ ಮತ್ತು ಶೈಲಜಾ ಟೀಚರ್ ಅವರಿಗೆ ಸಿಗುವ ಗೌರವ ಕಡಿಮೆ ಆಗಲ್ಲ. ಮಹಾಮಾರಿ ಕೊರೊನಾ ನಿಯಂತ್ರಿಸಿದ್ದಕ್ಕೆ ಶೈಲಜಾ ಅವರಿಗೆ ಕಾಂಗ್ರೆಸ್ ನಿಂದ ಇಂತಹ ಮಾತುಗಳು ಕೇಳುವಂತಾಗಿದೆ ಎಂದು ಕಿಡಿ ಕಾರಿದ್ದಾರೆ.

Comments

Leave a Reply

Your email address will not be published. Required fields are marked *