ಕೆಲಸಕ್ಕಾಗಿ ಮನೆಯಿಂದ ಹೊರ ಹೋದ ಯುವತಿ ಸುಟ್ಟು ಭಸ್ಮ

– ಬೆಂಕಿ ತಗುಲಿದ್ರೂ ಸಹಾಯಕ್ಕೆ ಬಾರದ ಜನ
– ಹೆದ್ದಾರಿ ಬಳಿಯ ಮೇಲ್ಸೇತುವೆ ಮೇಲೆ ಸಜೀವ ದಹನ

ಚಂಡಿಗಢ: 31 ವರ್ಷದ ಯುವತಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೇಲ್ಸೇತುವೆ ಮೇಲೆ ಸುಟ್ಟು ಭಸ್ಮವಾಗಿರುವ ಘಟನೆ ಪಂಜಾಬ್ ರಾಜ್ಯದ ಖನ್ನಾದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿಯೇ ಯುವತಿ ಸುಟ್ಟು ಭಸ್ಮವಾಗುತ್ತಿದ್ದರೂ ಸಾರ್ವಜನಿಕರು ಸಹಾಯಕ್ಕೆ ಬಂದಿಲ್ಲ ಎಂದು ವರದಿಯಾಗಿದೆ.

ಮನ್‍ಪ್ರೀತ್ ಕೌರ್ (31) ಸಾವನ್ನಪ್ಪಿದ ಮಹಿಳೆ. ಭಟ್ಟಲ್ ಗ್ರಾಮದ ಭಜನ್ ಸಿಂಗ್ ಅವರ ಪುತ್ರಿಯಾಗಿರುವ ಮನ್‍ಪ್ರೀತಿ ಇನ್ನು ವ್ಯಾಸಂಗ ಮಾಡುತ್ತಿದ್ದಳು. ಕೆಲಸದ ನಿಮಿತ್ ಬೆಳಗ್ಗೆ ಸುಮಾರು 7 ಗಂಟೆಯಿಂದ ಮನೆಯಿಂದ ಹೊರ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆ ಮನೆಯಲ್ಲಿ ನಡೆದಿಲ್ಲ ಎಂದು ಭಜನ್ ಸಿಂಗ್ ಹೇಳಿದ್ದಾರೆ.

ಬೆಳಗ್ಗೆ 8.30ಕ್ಕೆ ಪೊಲೀಸರಿಗೆ ಯುವತಿ ಬೆಂಕಿಗಾಹುತಿಯಾಗಿರುವ ವಿಷಯ ತಿಳಿದಿದೆ, ಪೊಲೀಸದು ದೌಡಾಯಿಸುವಷ್ಟರಲ್ಲಿ ಯುವತಿ ಸುಟ್ಟು ಭಸ್ಮವಾಗಿದದ್ದಳು. ಆತ್ಮಹತ್ಯೆ ಅಥವಾ ಕೊಲೆ ಬಗ್ಗೆ ಪೊಲೀಸರು ಗೊಂದಲದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಮನ್‍ಪ್ರೀತ್ ಕುಟುಂಬಸ್ಥರು ಮತ್ತು ಆಕೆ ಕಾಲೇಜಿನ ಸ್ನೇಹಿತರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *