ಕೆರೆಗೆ ಬಿತ್ತು ತಾಯಿಯ ಕಂಕುಳದಲ್ಲಿದ್ದ ಮೂರು ವರ್ಷದ ಕಂದಮ್ಮ

-ಸಿನಿಮೀಯ ರೀತಿಯಲ್ಲಿ ಬದುಕುಳಿದ ಮಗು

ಭೋಪಾಲ್: ತಾಯಿಯ ಕಂಕುಳದಲ್ಲಿದ್ದ ಮೂರು ವರ್ಷದ ಮಗು ಜಾರಿ ಕೆರೆಯ ಪಾಲಾಗಿದ್ದ ಕಂದಮ್ಮ ಸಿನಿಮೀಯ ರೀತಿಯಲ್ಲಿ ಬದುಕುಳಿದಿದೆ.

ಶನಿವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ನಗರದ ವಿಐಪಿ ರಸ್ತೆಯ ರಾಜಾ ಬೋಜ ಪ್ರತಿಮೆ ಬಳಿ ಕಾಜೀ ಕ್ಯಾಂಪ್ ನಿವಾಸಿಯಾದ ಇರ್ಷಾದ್ ತನ್ನ ಪತ್ನಿ ಹಾಗೂ ಮಗು ಜೊತೆ ಬಂದಿದ್ದರು. ಪ್ರತಿಮೆ ವೀಕ್ಷಣೆ ವೇಳೆ ದಿಢೀರ್ ಅಂತಾ ಕಂಕುಳದಲ್ಲಿದ್ದ ಮಗು ಜಾರಿ ಕೆರೆಯಲ್ಲಿ ಬಿದ್ದಿದೆ. ಪತಿ-ಪತ್ನಿ ಮಗುವಿನ ರಕ್ಷಣೆಗೆ ಕೂಗುತ್ತಿದ್ದಂತೆ ದಡದಲ್ಲಿ ಐಸ್ ಕ್ರೀಂ ಮಾರುತ್ತಿದ್ದ ಹರಿಓಂ ವರ್ಮಾ, ಪೌರ ಕಾರ್ಮಿಕ ವಾಹನದ ಚಾಲಕ ಸೋಹೆಲ್ ಕೆರೆಗೆ ಧುಮುಕಿ ಮಗುವನ್ನು ರಕ್ಷಿಸಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಮಗುವನ್ನು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ಬಳಿಕ ಮಗು ಚೇತರಿಸಿಕೊಂಡಿದೆ.

Comments

Leave a Reply

Your email address will not be published. Required fields are marked *