ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

– ಕೆಜಿ ಹಳ್ಳಿ ಪುಂಡರಿಗೆ ಕೇರಳವೇ ಅಡುಗುದಾಣ

ಬೆಂಗಳೂರು: ಇದು ಕೆಜಿ ಹಳ್ಳಿ ಟು ಕೇರಳ ಸ್ಟೋರಿ. ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್ ಪತ್ತೆಯಾಗಿದ್ದು, ಸಿಸಿಪಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ಮಾಡಿದ ಪುಂಡರು ಅಂತಾರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು, ಡಿಜೆ ಹಳ್ಳಿಯ ಪುಂಡರಿಗೆ ಕೇರಳ ರಾಜ್ಯವೇ ಅಡಗುತಾಣವಾಗಿದೆಯಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

ಮಂಗಳವಾರ ಗಲಾಟೆ ಮಾಡಿ ಊರು ಬಿಟ್ಟಿರುವ 30 ಕ್ಕೂ ಹೆಚ್ಚು ಲೋಕಲ್ ಪುಂಡರು ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂಧನವಾಗಿರುವ ಆರೋಪಿಗಳ ಮಾಹಿತಿ ಮತ್ತು ಕಾಲ್ ಡಂಪ್ ಲೊಕೇಶನ್ ನಲ್ಲಿ ಈ ಮಾಹಿತಿ ಬಟಾಬಲಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸಿಸಿಬಿ ತಂಡ ಕೇರಳದಲ್ಲಿ ಹಂಟಿಂಗ್ ಶುರು ಮಾಡಿದೆ. ಹೆಚ್ಚಿನ ಮಾಹಿತಿ ಕಲೆಹಾಕಿ ಪುಂಡರಿಗಾಗಿ ಬಲೆ ಬೀಸಿದೆ.

ಕೃತ್ಯದ ರುವಾರಿಗಳಾದ ಉಬೇರ್, ಮುದಾಸಿರ್ ಸೇರಿದಂತೆ 30ಕ್ಕೂ ಹೆಚ್ಚು ಜನರಗೆ ಕೇರಳ ಅಡಗುತಾಣವಾಗಿದೆ. ಕೇರಳವೇ ಸುರಕ್ಷಿತ ಸ್ಥಳ ಎಂದು ಭಾವಿಸಿದ ಪುಂಡರು, ಪ್ಲಾನ್ ಮಾಡಿ ಅಲ್ಲಿಗೆ ಪರಾರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *