ಕೆಂಪುಕೋಟೆಯ ಮೇಲೆ ಪವಿತ್ರ ತಿರಂಗ ಮಾತ್ರ ಹಾರಬೇಕು – ದುರದೃಷ್ಟಕರ ಎಂದ ತರೂರ್

ನವದೆಹಲಿ: ಕೆಂಪುಕೋಟೆಯ ಮೇಲೆ ಪವಿತ್ರ ತಿರಂಗ ಮಾತ್ರ ಹಾರಬೇಕು. ಆದರೆ ಇಂದಿನ ಘಟನೆ ದುರದೃಷ್ಟಕರ ಎಂದು ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ನಾನು ಮೊದಲಿನಿಂದಲೂ ರೈತ ಹೋರಾಟಕ್ಕೆ ಬೆಂಬಲವನ್ನು ನೀಡುತ್ತಾ ಬಂದಿದ್ದೇನೆ. ಆದರೆ ಕಾನೂನು ಬಾಹಿರವಾಗಿ ಬಂದರೆ ಕ್ಷಮಿಸಲು ಸಾಧ್ಯವಾಗುವುದಿಲ್ಲ. ಗಣರಾಜ್ಯೋತ್ಸವವಾದ ಇಂದು ತಿರಂಗ ಮಾತ್ರ ಕೆಂಪುಕೋಟೆಯ ಮೇಲೆ ಹಾರಾಡಬೇಕಿತ್ತು. ಅಧಿಕಾರಿಗಳು ಹಿಂಸಾಚಾರವನ್ನು ತಪ್ಪಿಸಬೇಕು. ಈ ಬಿಕ್ಕಟ್ಟನ್ನು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಪರಿಹರಿಸಬೇಕೇ ಹೊರತು ಬಲವಂತವಾಗಿ ಅಲ್ಲ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ವಿಶ್ವ ಪರಂಪರಿಕ ತಾಣವಾದ ಕೆಂಪುಕೋಟೆಯ ಮೇಲೆ ರೈತ ಸಂಘದ ಧ್ವಜ ಹಾರಿದೆ. ಅಷ್ಟೇ ಅಲ್ಲದೇ ಗುಮ್ಮಟದ ಮೇಲೆ ಸಿಖ್ ಧ್ವಜಗಳು ಹಾರಿದೆ.

ಸಾವಿರಾರು ಜನ ಒಂದೇ ಬಾರಿಗೆ ಕೆಂಪು ಕೋಟೆಗೆ ನುಗ್ಗಿದ ಪರಿಣಾಮ ಅಲ್ಲಿದ್ದ ಭದ್ರತಾ ಸಿಬ್ಬಂದಿಗೂ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ರೈತರು ಇಷ್ಟ ಬಂದ ಕಡೆ ಧ್ವಜವನ್ನು ಹಾರಿಸಿದ್ದಾರೆ.

Comments

Leave a Reply

Your email address will not be published. Required fields are marked *