ಕೃಷ್ಣ-ರಾಧೆ ಆದ ಐರಾ, ಜೂನಿಯರ್ ಯಶ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲೂ ವಿಶೇಷ ದಿನ ಬಂದರೆ ಮಕ್ಕಳಿಗೆ ಅಲಂಕಾರ ಮಾಡಿ ಅವರ ಫೋಟೋ ಕ್ಲಿಕ್ಕಿಸುತ್ತಾರೆ.

ಇತ್ತೀಚೆಗಷ್ಟೆ ಐರಾ ತನ್ನ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಳು. ಈ ವಿಶೇಷ ಕ್ಷಣಗಳನ್ನು ರಾಧಿಕಾ ಫೋಟೋಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳಿಗೂ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮಂಗಳವಾರ ಕೃಷ್ಣ ಜನ್ಮಾಷ್ಟಮಿ ಇತ್ತು. ಹೀಗಾಗಿ ರಾಧಿಕಾ ತಮ್ಮ ಮಗನಿಗೆ ಕೃಷ್ಣನ ವೇಷ ಹಾಕಿಸಿದ್ದರೆ, ಮಗಳು ಐರಾಳನ್ನು ರಾಧೆಯ ರೀತಿ ಅಲಂಕರಿಸಿದ್ದರು. ನಂತರ ಇಬ್ಬರನ್ನು ಒಟ್ಟಾಗಿ ಕೂರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋಗೆ “ನಮ್ಮ ಪುಟ್ಟ ಕೃಷ್ಣ, ರಾಧೆ ಅವರಿಂದ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ರಾಧಿಕಾ ತಮ್ಮ ಫೋಟೋವೊಂದನ್ನು ಅಪ್ಲೋಡ್ ಮಾಡಿ, ‘ನೀವು ನೀವಾಗಿರಿ ಯಾವಾಗಲೂ’ ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಈ ಫೋಟೋ ನೋಡಿದ ನಟಿ ರಮ್ಯಾ ಮೊದಲ ಬಾರಿಗೆ ರಾಧಿಕಾ ಪೋಸ್ಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.

https://www.instagram.com/p/CDwapnwAsTb/?igshid=1ibpnrfe9sjjy

ರಾಧಿಕಾ ಫೋಟೋಗೆ ಲೈಕ್ ಮಾಡಿರುವ ರಮ್ಯಾ ‘ತುಂಬಾ ಮುದ್ದಾಗಿದ್ದೀಯ’ ಎಂದು ಕಾಮೆಂಟ್ ಮಾಡಿದ್ದಾರೆ. ರಮ್ಯಾ ಕಾಮೆಂಟ್‍ಗೆ ರಾದಿಕಾ ಪಂಡಿತ್ ಕೂಡ ಉತ್ತರ ನೀಡಿದ್ದು, ‘ನಿಮ್ಮಷ್ಟು ಮುದ್ದಾಗಿಲ್ಲ. ಯಾವಾಗಲು ನಿಮ್ಮನ್ನು ಆರಾಧಿಸುತ್ತೀನಿ’ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *