‘ಕೃಷ್ಣ ಟಾಕೀಸ್’ ಮನಮೋಹನ ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್

ಜಯ್ ರಾವ್ ನಟನೆಯ ‘ಕೃಷ್ಣ ಟಾಕೀಸ್’ ಸಿನಿಮಾ ಏಪ್ರಿಲ್ 16ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ. ಚಿತ್ರದ ಪ್ರಚಾರ ಚಟುವಟಿಕೆಯಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದೀಗ ಸಿನಿಮಾದ ಬಹು ನಿರೀಕ್ಷಿತ ರೊಮ್ಯಾಂಟಿಕ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಮತ್ತಷ್ಟು ಗಮನ ಸೆಳೆದಿದೆ. ವಿಜಯಾನಂದ್ ಸಾಹಿತ್ಯದಲ್ಲಿ ಮೂಡಿ ಬಂದ ಮನಮೋಹನ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯಲ್ಲಿ ಈ ಹಾಡಿಗೆ ಅನ್ವೇಷ, ವಿಹಾನ್ ಆರ್ಯ ದನಿಯಾಗಿದ್ದಾರೆ. ಈ ಮೊದಲು ಚಿತ್ರತಂಡ ಮನಮೋಹನ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿತ್ತು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಪಡೆದ ಹಿನ್ನೆಲೆ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿದೆ ‘ಕೃಷ್ಣ ಟಾಕೀಸ್’ ಚಿತ್ರತಂಡ.

ವಿಜಯಾನಂದ್ ಕಥೆ ಬರೆದು ನಿರ್ದೇಶನ ಮಾಡಿರುವ ಹಾರಾರ್ ಥ್ರಿಲ್ಲರ್ ಕಹಾನಿ ಒಳಗೊಂಡ ಸಿನಿಮಾ ‘ಕೃಷ್ಣ ಟಾಕೀಸ್’. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಸಿನಿಮಾ ಕಥೆ ಹೆಣೆಯಲಾಗಿದ್ದು, ಆಕ್ಷನ್, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲಾ ಎಲಿಮೆಂಟ್ಗಳು ಚಿತ್ರದಲ್ಲಿವೆ. ಅಜಯ್ ರಾವ್ ಪತ್ರಕರ್ತನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮೊದಲ ಬಾರಿ ಹಾರಾರ್ ಥ್ರಿಲ್ಲರ್ ಕಹಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಜಯ್ ರಾವ್ ಗೆ ನಾಯಕ ನಟಿಯಾಗಿ ಅಪೂರ್ವ ತೆರೆ ಮೇಲೆ ಮಿಂಚಿದ್ದಾರೆ.

‘ಕೃಷ್ಣ ಟಾಕೀಸ್’ ಸಿನಿಮಾದಲ್ಲಿ ಚಿಕ್ಕಣ್ಣ ನಟಿಸಿದ್ದು. ಅಜಯ್ ರಾವ್ ಚಿಕ್ಕಣ್ಣ ಕಾಂಬಿನೇಷನ್ ಮೊದಲ ಬಾರಿಗೆ ತೆರೆ ಮೇಲೆ ಒಂದಾಗಿದೆ. ಚಿತ್ರಕ್ಕೆ ನಿರ್ದೇಶಕ ವಿಜಯಾನಂದ್ ಸಾಹಿತ್ಯ ರಚಿಸಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮೂಡಿ ಬಂದಿವೆ. ಗೋವಿಂದರಾಜು ಎ.ಹೆಚ್ ಆಲೂರು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಿಂಧೂ ಲೋಕನಾಥ್, ಪ್ರಕಾಶ್ ತುಮಿನಾಡು, ಮಂಡ್ಯ ರಮೇಶ್, ಶೋಭರಾಜ್, ಯಶ್ ಶೆಟ್ಟಿ ಒಳಗೊಂಡಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ

Comments

Leave a Reply

Your email address will not be published. Required fields are marked *