ಕೃಷಿ ಕಾನೂನು ವಾಪಸ್ ಪಡೆಯದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ: ಕಣ್ಣೀರಿಟ್ಟ ರೈತ ಮುಖಂಡ

– ರೈತರು ನಾಶ ಆಗೋದನ್ನ ನೋಡಲಾರೆ
– ವ್ಯಕ್ತಿಯೋರ್ವನ ಕಪಾಳಕ್ಕೆ ಬಾರಿಸಿದ ರಾಕೇಶ್ ಟಿಕಾಯತ್

ನವದೆಹಲಿ: ಕೃಷಿ ಕಾನೂನು ವಾಪಸ್ ಪಡೆಯದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕಣ್ಮುಂದೆಯೇ ರೈತರು ನಾಶ ಆಗೋದನ್ನ ನೋಡಲಾರೆ ಎಂದು ರೈತ ಹೋರಾಟದ ಮುಂದಾಳು, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದ್ದಾರೆ.

ಘಾಜಿಯಾಬಾದ್ ಗಡಿಯಲ್ಲಿ ಧರಣಿ ಕುಳಿತಿರುವ ರೈತರನ್ನ ಖಾಲಿ ಮಾಡಿಸಲು ಕೇಂದ್ರ ಸರ್ಕಾರದ ಜೊತೆ ಉತ್ತರ ಪ್ರದೇಶದ ಸಿಎಂ ಯೋಗಿ ಸರ್ಕಾರ ಕೈ ಜೋಡಿಸಿದೆ. ಈ ಹಿನ್ನೆಲೆ ಘಾಜಿಯಾಬಾದ ಪ್ರದೇಶವನ್ನ ಖಾಕಿ ಸುತ್ತುವರಿದಿದ್ದು, ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಜೆಯಾಗುತ್ತಲೇ ಪೊಲೀಸರ ಸಂಖ್ಯೆ ಹೆಚ್ಚಳವಾಗಿದ್ದು, ಕೆಲ ರೈತರು ಭಯದಿಂದ ಊರುಗಳತ್ತ ಪ್ರಯಾಣಿಸುವ ಒತ್ತಡದ ಪರಿಸ್ಥಿತಿ ಮೇಲ್ನೋಟಕ್ಕೆ ನಿರ್ಮಾಣವಾಗಿದೆ. ಆದ್ರೆ ರೈತ ನಾಯಕ ರಾಕೇಶ್ ಟಿಕಾಯತ್, ಕಾನೂನುಗಳನ್ನ ಹಿಂಪಡೆಯುವರೆಗೂ ಪ್ರತಿ ಭಟನಾ ಸ್ಥಳದಿಂದ ಕದಲಲ್ಲ ಎಂದು ದೃಢವಾಗಿದ್ದಾರೆ.

ಸಂಜೆ ವೇಳೆ ಕೆಲ ರೈತರು ಹಿಂದಿರುಗಿತ್ತಿರೋದಕ್ಕೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ಇಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ವಿರುದ್ಧ ಸಂಚು ರೂಪಿಸಲಾಗುತ್ತೆ ಅನ್ನೋ ಕಲ್ಪನೆ ಸಹ ನನಗಿರಲಿಲ್ಲ. ನನ್ನ ಪತ್ನಿ ಬೇರೆ ಯಾರಿಗೂ ತನ್ನ ಮತ ಚಲಾಯಿಸಿದ್ರು. ಆದ್ರೆ ಎಲ್ಲರ ವಿರೋಧದ ನಡುವೆಗೂ ಬಿಜೆಪಿಗೆ ಮತ ನೀಡಿದೆ. ಬಿಜೆಪಿ ಮತ ನೀಡಿ ದೇಶದ್ರೋಹದ ಕೆಲಸ ಮಾಡಿದೆ ಅನ್ನೋದು ಮನವರಿಕೆಯಾಗ್ತಿದೆ ಎಂದು ಭಾವುಕರಾದರು.

ಈ ಸರ್ಕಾರ ರೈತರನ್ನ ಅವಮಾನಿಸುವ ಮತ್ತು ಕೆಟ್ಟ ಹೆಸರು ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರತಿಭಟನೆ ಸ್ಥಳಕ್ಕೆ ಬರುತ್ತಿದ್ದು ನೀರು ಕಡಿತವಾಗಿದೆ. ವಿದ್ಯುತ್ ಸಂಪರ್ಕ ಸಹ ಕಡಿತಗೊಳಿಸಲಾಗಿದೆ ಎಂದರು.

ಮತ್ತೊಂದು ಕಡೆ ರಾಕೇಶ್ ಸೋದರ ನರೇಶ್ ಮಾತನಾಡಿ, ಪ್ರತಿಭಟನೆ ಅಂತ್ಯಗೊಳಿಸುವುದು ಉತ್ತಮ. ಮೂಲಭೂತ ಸೌಕರ್ಯಗಳನ್ನ ಕಡಿತಗೊಳಿಸಿದ ಮೇಲೆ ಧರಣಿ ನಡೆಸೋದದರೂ ಹೇಗೆ? ಹಾಗಾಗಿ ರೈತರು ಇಲ್ಲಿಂದ ಹೊರಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ರಾಕೇಶ್ ಟಿಕಾಯತ್ ಓರ್ವ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದರು. ಈತ ನಮ್ಮ ಗುಂಪಿನವನು ಅಲ್ಲ. ಮಾಧ್ಯಮ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಕ್ಯಾಮೆರಾಗಳ ಮುಂದೆ ಕೆನ್ನೆಗೆ ಏಟು ಕೊಟ್ಟರು.

Comments

Leave a Reply

Your email address will not be published. Required fields are marked *