ಕಾಂಗ್ರೆಸ್‍ಗೆ ಮಂಡ್ಯದ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಹೆಚ್‍ಡಿಕೆ

ಬೆಂಗಳೂರು: ಕೈ ನಾಯಕರಿಗೆ ಮಂಡ್ಯದ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಆಯೋಜನೆಯ ರೈತರ ಸಮಾವೇಶಕ್ಕೆ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಐದು ವರ್ಷದಲ್ಲಿ ಇನ್ನೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ರೆ ಅಧಿಕಾರದಲ್ಲಿ ಯಾವ ನಾಯಕರು ರೈತರ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಕಿಡಿ ಕಾರಿದರು.

ಮೊದಲ ಬಾರಿಗೆ ಜನತಾ ದಳ ರೈತರ ಮನೆಗಳಿಗೆ ಭೇಟಿ ನೀಡಿ ಪರಿಹಾರದ ಚೆಕ್ ನೀಡಿತು. ತದನಂತರ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹ ಭೇಟಿ ನೀಡಿದರು. ಕೊನೆಗೆ ಕಾಂಗ್ರೆಸ್ ನವರು ರಾಹುಲ್ ಗಾಂಧಿ ಅವರನ್ನ ಕರೆತಂದು ರೈತ ಕುಟುಂಬಗಳಿಗೆ ಚೆಕ್ ವಿತರಿಸಿದರು. ಆದ್ರೆ ಆ ಪರಿಹಾರದ ಚೆಕ್ ನಿಂದ ಇನ್ನು ಹಣ ಬಂದಿಲ್ಲ ಎಂದು ಆರೋಪಿಸಿದರು. ಇದೀಗ ಮಂಡ್ಯ ಮೂಲಕ ಇಂಡಿಯಾದ ಗದ್ದುಗೆ ಹಿಡಿಯುತ್ತೆ ಅಂತ ಕಾಂಗ್ರೆಸ್ ರೈತ ಸಮಾವೇಶ ಆಯೋಜಿಸಿದೆ. ರೈತರೇನು ಇವರ ರಾಜಕೀಯ ಅರಿಯದಷ್ಟು ದಡ್ಡರೇನಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

 

Comments

Leave a Reply

Your email address will not be published. Required fields are marked *