ಕರ್ನಾಟಕ ಲಾಕ್‍ಡೌನ್ – ಗಾರ್ಮೆಂಟ್ಸ್ ತೆರೆಯಲು ಅನುಮತಿ

ಬೆಂಗಳೂರು: ಲಾಕ್‍ಡೌನ್‍ಗಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಮತ್ತೆ ಬದಲಾವಣೆಯಾಗಿದೆ. ಪರಿಷ್ಕೃತ ಮಾರ್ಗಸೂಚಿಯಲ್ಲಿ ಗಾರ್ಮೆಂರ್ಟ್ ಗಳಲ್ಲಿ ಶೆ.50ರಷ್ಟು ನೌಕರರಿಗೆ ಅನುಮತಿ ಕೊಡಲಾಗಿದೆ.

ಉತ್ಪಾದನಾ ವಲಯದ ಗಾರ್ಮೆಂಟ್ಸ್ ಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ಬಹುತೇಕ ಗಾರ್ಮೇಂಟ್ಸ್ ಗಳು  ಉತ್ಪಾದನಾ ವಲಯವೇ ಆಗಿರುವ ಕಾರಣ ಸರ್ಕಾರದ ಪರಿಷ್ಕೃತ  ಆದೇಶ ಎಲ್ಲಾ ಗಾರ್ಮೆಂಟ್ಸ್ ಗಳಿಗೆ ಅನ್ವಯವಾಗಲಿದೆ.

ಗಾರ್ಮೆಂಟ್ಸ್ ನೌಕರರು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಗಾರ್ಮೆಂಟ್ಸ್ ನೌಕರರು ಹಳ್ಳಿಗಳಿಗೆ ತೆರಳಿರುವ ಕಾರಣ ಸರ್ಕಾರದ ಹೊಸ ಆದೇಶದಿಂದ ಗೊಂದಲ ಉಂಟಾಗಿದೆ.

Comments

Leave a Reply

Your email address will not be published. Required fields are marked *