ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ನೈತಿಕ ಬೆಂಬಲ ನೀಡಿದವರು ಯಾರು?

– ಬಂದ್‍ಗೆ ಯಾರು ಅನುಮತಿ ನೀಡಿಲ್ಲ
– ಚೇಷ್ಟೆ ಮಾಡಿದ್ರೆ ಕ್ರಮ – ಪಂಥ್
– ಬಸ್ ಓಡಿಸಿದ್ರೆ ಗಲಾಟೆ – ವಾಟಾಳ್

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಕೆಲವೊಂದು ಸಂಘಟನೆಗಳು ಬಂದ್ ಬೆಂಬಲಿಸಿದರೆ ಇನ್ನು ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ಘೋಷಿಸಿವೆ.

ಬಂದ್ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ. ಬಸ್ ಸ್ಟ್ಯಾಂಡ್, ಮೆಟ್ರೋ ಸ್ಟೇಷನ್ ಬಳಿ ಹೆಚ್ಚಿನ ನಿಯೋಜನೆ ಮಾಡಲಾಗಿದೆ. ಬಂದ್‍ಗೆ ಯಾರೂ ಅನುಮತಿ ಕೇಳಿಲ್ಲ, ನಾವು ಕೊಟ್ಟಿಲ್ಲ. ಬಿಎಂಟಿಸಿ, ಕೆಎಸ್‍ಆರ್‌ಟಿಸಿ ಬೆಂಬಲ ಕೊಟ್ಟಿಲ್ಲ. ಜನ ನಿರ್ಭಯವಾಗಿ ಓಡಾಡಬಹುದು. ಚೇಷ್ಟೆ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

 

ಕನ್ನಡ ಸಂಘಟನೆಗಳು ಕಿಡಿ:
ಮರಾಠ ನಿಗಮ ಒಂದ್ಕಡೆಯಾದರೆ ರೋಲ್‍ಕಾಲ್‍ಗಳು, ವಸೂಲಿಕೋರರು ಅಂತ ಟೀಕಿಸಿರುವ ಹಿನ್ನೆಲೆಯಲ್ಲಿ ಕನ್ನಡ ಹೋರಾಟಗಾರರು ಮಾತ್ರ ಜಿದ್ದಿಗೆ ಬಿದ್ದಿದ್ದಾರೆ. ಬಂದ್‍ನ ಮುಂಚೂಣಿ ನಾಯಕ ವಾಟಾಳ್ ನಾಗರಾಜ್ ಅವರು, ನಾವೇನ್ ಚೇಷ್ಟೆ ಮಾಡಲ್ಲ. ಯಡಿಯೂರಪ್ಪ ಪೊಲೀಸರನ್ನು ಮಾರು ವೇಷದಲ್ಲಿ ಕಳಿಸಿ ಏನಾದ್ರೂ ಅನಾಹುತ ಮಾಡಿದರೆ ನಾವು ಜವಾಬ್ದಾರಿ ಅಲ್ಲ ಎಂದಿದ್ದಾರೆ.

ನಾವ್ ಯಾಕ್ರೀ ಅನುಮತಿ ಕೇಳಬೇಕು. ಇತಿಹಾಸದಲ್ಲಿ ಕರ್ನಾಟಕ ಬಂದ್‍ಗೆ ನಾವು ಪೊಲೀಸರ ಅನುಮತಿ ಕೇಳಿಲ್ಲ ಕೇಳಲ್ಲ. ನಾಳೆ ರ‍್ಯಾಲಿ ಇರುತ್ತದೆ. ನಾವ್ಯಾರಿಗೂ ಜಗ್ಗಲ್ಲ. ಗುಂಡೇಟು ಹೊಡೀತಾರ ಹೊಡಿಲಿ ನೋಡೋಣ ಅಂತ ಪೊಲೀಸ್ ಕಮೀಷನರ್‌ಗೆ ವಾಟಾಳ್ ಸವಾಲ್ ಹಾಕಿದ್ದಾರೆ. ಇವತ್ತು ಸಾಂಕೇತಿಕವಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಉರುಳು ಸೇವೆ ಮಾಡಿದ್ದಾರೆ. ಅಲ್ಲದೆ, ಮಾರ್ಕೆಟ್, ಮೆಜೆಸ್ಟಿಕ್‍ನಲ್ಲಿ ಬಂದ್‍ಗೆ ಸಹಕರಿಸುವಂತೆ ಪ್ರಚಾರ ಆಂದೋಲನ ನಡೆಸಿದರು.

 

ಬಸ್ ಓಡಿಸಿದರೆ ಗಲಾಟೆ ಪಕ್ಕಾ ಆಗುತ್ತದೆ. ಮಾಲ್, ಥಿಯೇಟರ್ ಓಪನ್ ಮಾಡ್ಬೇಡಿ. ರಸ್ತೆ ರಸ್ತೆಗಳಲ್ಲಿ ಹೋರಾಟ ಮಾಡುತ್ತೇವೆ. ನಿಗದಿತ ಸ್ಥಳಕ್ಕೆ ಹೋರಾಟ ಸೀಮಿತ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಸಾರಾಗೋವಿಂದು ಕೂಡ ಯಡಿಯೂರಪ್ಪರನವೇ ನಿಮ್ಮ ಮನವಿ ಯಾರಿಗೆ ಬೇಕು. ಮರಾಠ ನಿಗಮ ಹಿಂಪಡೀತಿವಿ ಅಂತೇಳಿ. ಆ ಕ್ಷಣವೇ ಬಂದ್ ವಾಪಸ್ ಪಡೀತೀವಿ ಅಂದಿದ್ದಾರೆ. ಬಂದ್‍ಗೆ ಬೆಂಬಲ ಕೊಡದವರಿಗೆ ನಾಚಿಕೆ ಆಗ್ಬೇಕು ಅಂತ ಕಿಡಿಕಾರಿದ್ದಾರೆ.

ಕರವೇ ನಾರಾಯಣಗೌಡ , ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಂದ್ ಮಾಡ್ತೀವಿ. ನಿಮ್ಮ ಭಂಡತನ ಬಿಡಿ. ನಾಳೆ ಬೇರೆ ಸಮುದಾಯಗಳು ಕೇಳಿದರೆ ಆಗ ಏನ್ ಮಾಡ್ತೀರಿ? ಮರಾಠಿ ನಿಗಮಕ್ಕೆ ಕೊಟ್ಟಿರೋ ಹಣನಾ ಉತ್ತರ ಕರ್ನಾಟಕದ ಪ್ರವಾಹ ಬಾಧಿತರಿಗೆ ಕೊಡಿ ಅಂತ ಕಿಡಿಕಾರಿದ್ದಾರೆ.

ನಾಳೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಆಗಲಿದೆ. ಬೆಳಗ್ಗೆ 10.30ರಿಂದ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ರ‍್ಯಾಲಿ ನಡೆಯಲಿದೆ.

ಬಂದ್‍ಗೆ ಯಾರ ಬೆಂಬಲ?
ಕರವೇ ನಾರಾಯಣಗೌಡರ ಬಣ, ಕರವೇ ಶಿವರಾಮೇಗೌಡರ ಬಣ, ಜಯಕರ್ನಾಟಕ ಸಂಘಟನೆ, ಕರ್ನಾಟಕ ನವ ನಿರ್ಮಾಣ ಸೇನೆ, ಕರ್ನಾಟಕ ಸ್ವಾಭಿಮಾನಿ ಬಳಗ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕೆಲವು ಆಟೋ ಚಾಲಕರ ಸಂಘ, ಓಲಾ, ಊಬರ್ ಚಾಲಕರ ಸಂಘ, ಟ್ಯಾಕ್ಸಿ ಯೂನಿಯನ್ ಬೆಂಬಲ ನೀಡಿವೆ.

ನೈತಿಕ ಬೆಂಬಲ ಕೊಟ್ಟವರು
* ಹೋಟೆಲ್ ಮಾಲೀಕರ ಸಂಘ – ಹೋಟೆಲ್ ಓಪನ್ ಇರುತ್ತೆ
* ರಸ್ತೆ ಬದಿ ವ್ಯಾಪಾರಿಗಳ ಸಂಘ – ರಸ್ತೆ ಬದಿ ವ್ಯಾಪಾರ ಇರುತ್ತೆ
* ಪೆಟ್ರೋಲ್ ಬಂಕ್ ಮಾಲೀಕರ ಸಂಘ – ಪೆಟ್ರೋಲ್ ಬಂಕ್ ಓಪನ್ ಇರುತ್ತೆ
* ಆಟೋ ಚಾಲಕರ ಸಂಘ
* ಲಾರಿ ಮಾಲೀಕರ ಸಂಘ
* ಮ್ಯಾಕ್ಸಿಕ್ಯಾಬ್ ಚಾಲಕರ ಸಂಘ
* ಪೀಣ್ಯ ಕೈಗಾರಿಕಾ ಸಂಘ – ಕಾರ್ಮಿಕರು, ಕೈಗಾರಿಕೋದ್ಯಮಿಗಳ ಹಿತದೃಷ್ಟಿಯಿಂದ 1 ಗಂಟೆ ಹೆಚ್ಚು ಕೆಲಸ ಮಾಡಿ ನೈತಿಕ ಬೆಂಬಲ
* ರೈತ ಸಂಘ
* ಕರವೇ ಪ್ರವೀಣ್ ಶೆಟ್ಟಿ ಬಣ
* ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್

 

ಯಾರ ಬೆಂಬಲ ಇಲ್ಲ?
* ಬಿಎಂಟಿಸಿ, ಕೆಎಸ್‍ಆರ್‌ಟಿಸಿ – ಓಡಾಡುತ್ತೆ
* ಖಾಸಗಿ ಸಾರಿಗೆ ಸಂಘ – ಓಡಾಡುತ್ತೆ
* ಹೋಟೆಲ್, ಬೇಕರಿ, ಅಂಗಡಿಗಳು – ತೆರೆಯುತ್ತದೆ
* ಸರ್ಕಾರಿ ಕಚೇರಿ, ಬ್ಯಾಂಕ್‍ಗಳು – ಓಪನ್‌ ಇರಲಿದೆ
* ಎಐಟಿಯುಸಿ ಸಂಘಟನೆ

Comments

Leave a Reply

Your email address will not be published. Required fields are marked *