ಕನ್ನಡವೇ ನಮ್ಮ, ಭಾಷೆ, ಧರ್ಮವೆಂದು ಹೇಳಬೇಕಿದೆ: ಬಿ. ಸುರೇಶ್

ಧಾರವಾಡ: ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳು ಸರ್ಕಾರ ಬಂದಾಗ ನಾವು ಅದಕ್ಕೆ ಉತ್ತರ ನೀಡಬೇಕಿದೆ ಎಂದು ಹಿರಿಯ ನಟ ಬಿ. ಸುರೇಶ್ ಹೇಳಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ನುಡಿ ಸಡಗರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮದು ಕನ್ನಡ ದೇಶ, ಕನ್ನಡ ಧರ್ಮ, ಕನ್ನಡ ಭಾಷೆ ಅಂತ ಹೇಳಬೇಕಾಗುತ್ತದೆ ಎಂದರು.

ಕರ್ನಾಟಕದಲ್ಲಿ ನಡೆಯುವ ಕೇಂದ್ರ ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡ ಇರೋದಿಲ್ಲ, ಆದರೆ ಅಲ್ಲಿ ಸಂಪೂರ್ಣ ಹಿಂದಿ ಇರುತ್ತದೆ. ಇದರ ಬಗ್ಗೆ ಪ್ರಶ್ನೆ ಕೇಳಿದ್ರೆ ಯಾರು ಉತ್ತರವನ್ನೇ ಕೊಡೊದಿಲ್ಲ. ಇಂತಹ ಕಾರ್ಯಕ್ರಮ ತಮಿಳುನಾಡಿನಲ್ಲಿ ನಡೆದರೆ ಪೂರ್ತಿ ತಮಿಳು ಇರುತ್ತದೆ ಎಂದಿದ್ದಾರೆ.

ನಮ್ಮ ಪ್ರತಿನಿಧಿಗಳು ನಮ್ಮ ನುಡಿ ಇಲ್ಲದ ಕಾರ್ಯಕ್ರಮಗಳಿಗೆ ಬೆಂಬಲ ಇಲ್ಲ ಅಂತ ಹೇಳುವುದಿಲ್ಲ, ಬೆಂಬಲ ಇಲ್ಲ ಎಂದು ಹೇಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ದೇಶದಲ್ಲೇ ಒಂದು ಭಾಷೆ ಎನ್ನುವುದು ಬಂದು ಬಿಟ್ಟಿದೆ. ನಾವು ಮತ್ತೆ ಮತ್ತೆ ಕನ್ನಡವೇ ನಮ್ಮ, ಭಾಷೆ, ಧರ್ಮ ಅಂತ ಹೇಳಬೇಕಿದೆ ಎಂದರು.

Comments

Leave a Reply

Your email address will not be published. Required fields are marked *