ಎಮ್ಮೆಗಳನ್ನು ಕರೆತರಲು ಹೋಗಿ ಯುವಕ ನೀರು ಪಾಲು

ಹಾವೇರಿ: ಎಮ್ಮೆಗಳನ್ನ ಹೊಡೆದುಕೊಂಡು ಬರಲು ನದಿಗೆ ಹಾರಿದ ಯುವಕ ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ನಡೆದಿದೆ.

ನೀರು ಪಾಲಾದ ಯುವಕನನ್ನ ಚಂದ್ರು ದಳವಾಯಿ(25) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ವರದಾ ನದಿಯಲ್ಲಿ ಮೂರು ಎಮ್ಮೆಗಳು ಸಿಲುಕಿಕೊಂಡಿದ್ದವು. ಎಮ್ಮೆಗಳನ್ನ ಕರೆದುಕೊಂಡು ಬರುವುದಾಗಿ ಹೇಳಿ ನದಿ ನೀರಿನಲ್ಲಿ ಈಜಿಕೊಂಡು ತೆರಳಿದ್ದು, ನೀರಿನ ಸೆಳೆತಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಎಮ್ಮೆಗಳು ನದಿಯ ನಡುವೆ ಇರೋ ಅರಣ್ಯದಲ್ಲಿ ಮೇಯಲು ಹೋಗಿದ್ದವು. ಆದರೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಅಲ್ಲಿಯೇ ಎಮ್ಮೆಗಳು ಉಳಿದುಕೊಂಡಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *