ಎಣ್ಣೆ ಮತ್ತಿನಲ್ಲಿ ನದಿಗೆ ಹಾರಿದ ಮಹಿಳೆ- ಸ್ಥಳೀಯ ಯುವಕರಿಂದ ರಕ್ಷಣೆ

ಮಡಿಕೇರಿ: ಮಾನಸಿಕವಾಗಿ ನೊಂದು ಜನರು ಆತ್ಮಹತ್ಯೆನೇ ಕೊನೆ ಪರಿಹಾರ ಅಂತ ಸಾವಿಗೆ ಶರಣಾಗೋದನ್ನ ನೀವೆಲ್ಲರೂ ನೋಡಿರ್ತೀರಾ ಕೇಳಿರ್ತೀರಾ. ಆದರೆ ಈ ಮಹಳೆ ಎಣ್ಣೆ ಮತ್ತಿನಲ್ಲಿ ಮೈದುಂಬಿ ಭೋರ್ಗರೆದು ಹರಿಯುತ್ತಿರುವ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಈ ಘಟನೆ ನಡೆದಿದೆ. ಮೂರ್ನಾಡಿನ ಮಹಿಳೆ ಮುನಿಯಮ್ಮ ಸೋಮವಾರ ಸಂಜೆ ಬಲಮುರಿಯ ಕಾವೇರಿ ಹೊಳೆ ಬಳಿ ಹೋಗಿದ್ದಾರೆ. ಹೋದವರೆ ಸೇತುವೆ ಮೇಲೆ 20 ಸೆಕೆಂಡ್ ನಿಂತಿದ್ದಾರೆ. ಬಳಿಕ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾರೆ.

ಈ ದೃಶ್ಯವನ್ನು ನದಿಯ ಅನತಿ ದೂರದಲ್ಲಿ ಕುಳಿತಿದ್ದ ಕೆಲ ಯುವಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ದೇವಾಲಯ ಸಮೀಪದಲ್ಲೇ ಇದ್ದ ಸೂರಜ್ ಮತ್ತು ಕಿರಣ್ ಎಂಬ ಯುವಕರು ನದಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ಮಹಿಳೆಯನ್ನು ನೋಡಿದ್ದಾರೆ. ಕೂಡಲೇ ಮಹಿಳೆ ತೇಲಿ ಹೋದಂತೆ ನದಿ ದಂಡೆಯಲ್ಲೇ ಓಡಿದ್ದಾರೆ. ಹೀಗೆ ನದಿ ದಂಡೆಯಲ್ಲೇ ಒಂದು ಕಿಲೋಮೀಟರ್ ಓಡುತ್ತಲೇ ಬಳಿಕ ಹಗ್ಗವನ್ನು ಪಡೆದು ಅದರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

ನಂತರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಡ ಮತ್ತು ಮಗನೊಂದಿಗೆ ಇದ್ದ ಮಹಿಳೆ ಮುನಿಯಮ್ಮ, ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಆದರೆ ಸೋಮವಾರ ಸಂಜೆ ಹೀಗೆ ಮಾಡಿಕೊಂಡಿರುವುದಕ್ಕೆ ನೈಜ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಮಗ ಮಾತ್ರ ತಾಯಿ ಎಣ್ಣೆ ಹೊಡೆದಿದ್ದರು. ಇದರಿಂದಾಗಿಯೇ ಬಿದ್ದಿದ್ದಾರೆ ಎನ್ನುತ್ತಿದ್ದಾನೆ.

ಈ ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *