ಎಗ್ ಬುರ್ಜಿಗಾಗಿ ನಡೆದ ಜಗಳ – ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ

– ಕಾರಣ ಕೇಳಿ ನಗಲಾರಂಭಿಸಿದ ಪೊಲೀಸರು

ಮುಂಬೈ: ಎಗ್ ಬುರ್ಜಿಗಾಗಿ ದಂಪತಿ ಮಧ್ಯೆ ನಡೆದಿರುವ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ಮಹಾಷ್ಟ್ರದ ಬುಲ್ಬಾನಾದ ಒಂದು ಗ್ರಾಮದಲ್ಲಿ ನಡೆದಿದೆ.

ದಂಪತಿ ಮುದ್ದಾದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದರು. ಒಂದು ದಿನ ಪತಿ 3 ಮೊಟ್ಟೆಯನ್ನು ತಂದು ಎಗ್‍ಬುರ್ಜಿಯನ್ನು ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಅಷ್ಟರಲ್ಲಾಗಲೇ ಏನೋ ಕೆಲಸ ನೆನಪಾಗಿ ಹೊರಗೆ ಹೋಗಿ ಬರುತ್ತೇನೆ. ಊಟಕ್ಕೆ ಎಗ್ ಬಿರ್ಜಿಯನ್ನು ಮಾಡಿಡುವಂತೆ ಹೇಳಿ ಹೋಗಿದ್ದಾನೆ.

ಪತ್ನಿ ಎಗ್ ಬುರ್ಜಿಯನ್ನು ಮಾಡಿಟ್ಟಿದ್ದಾಳೆ. ಆದರೆ ಅಡುಗೆ ಮನೆಯಲ್ಲಿದ್ದ ಎಗ್ ಬುರ್ಜಿಯನ್ನು ನೋಡಿದ ಮಗಳು ಹಸಿವಾಗಿದೆ ಎಂದು ಸಂಪೂರ್ಣ ತಿಂದು ಮುಗಿಸಿದ್ದಾಳೆ. ಪತಿ ಬದಲು ಮಗಳು ತಿಂದಿದ್ದಾಳೆ ಬಿಡು ಎಂದು ಪತ್ನಿ ಸುಮ್ಮನಾಗಿದ್ದಾಳೆ.

ಪತಿ ಹಸಿವಿನಿಂದ ಮನೆಗೆ ಬಂದಿದ್ದಾನೆ. ಊಟ ಬಡಿಸುವಾಗ ಎಗ್ ಬುರ್ಜಿಯನ್ನು ಹಾಕು ಎಂದು ಹೇಳಿದ್ದಾನೆ. ಆಗ ನಿಮ್ಮ ಮಗಳು ತಿಂದು ಖಾಲಿ ಮಾಡಿದ್ದಾಳೆ ಎಂದು ಹೇಳಿದ್ದಾಳೆ. ಆಗ ಸಿಟ್ಟಿನಿಂದ ಹೆಂಡತಿಯ ಮೇಲೆ ರೇಗಾಡಿದ್ದಾನೆ. ಅವರಿಬ್ಬ ಮಧ್ಯೆ ಎಗ್‍ಬುರ್ಜಿಗಾಗಿ ನಡೆದ ಜಗಳ ಪೊಲೀಸ್ ಠಾಣೆಯ ಮೆಟ್ಟಿಲು ಏರುವವರೆಗೂ ಬಂದಿದೆ.

ಜಗಳದ ಕಾರಣ ಕೇಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಿದ್ದು ಬಿದ್ದು ನಗಲಾರಂಭಿಸಿದ್ದಾರೆ. ನಂತರ ಸಿಬ್ಬಂದಿ ಅಂಗಡಿಗೆ ಹೋಗಿ ಮೂರು ಮೊಟ್ಟೆಯನ್ನು ತಂದು ದಂಪತಿಗೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *