ಉಮಾಪತಿಗೆ ಬ್ಲ್ಯಾಕ್‍ಮೇಲ್, ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಆಡಿಯೋ ಬಾಂಬ್

ಬೆಂಗಳೂರು: ನಟ ದರ್ಶನ್ ಹೋಟೆಲ್‍ನಲ್ಲಿ ಹೊಡೆದಿರುವುದು ನಿಜ. ದರ್ಶನ್ ಜೊತೆಗಿರುವವರೆಲ್ಲರು ಪೋಲಿಗಳು. ಉಮಾಪತಿಗೆ ದರ್ಶನ್ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ ಎಂದು ಸಂದೇಶ್  ಧ್ವನಿಯನ್ನು ಹೋಲುವ ಆಡಿಯೋ ಈಗ ಬಹಿರಂಗವಾಗಿದೆ.

ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಮತ್ತು ನಿರ್ದೇಶನ ಇಂದ್ರಜಿತ್ ಲಂಕೇಶ್ ಧ್ವನಿಯನ್ನೇ ಹೋಲುವ ಆಡಿಯೋ ಈಗ ರಿವೀಲ್ ಆಗಿದೆ. ಈ ಆಡಿಯೋದಲ್ಲಿ ದರ್ಶನ್ ಹೊಡೆದಿರುವುದು ನಿಜ ಎಂದು ಸಂದೇಶ್ ಹೇಳಿದ್ದಾರೆ.

ಆಡಿಯೋದಲ್ಲಿ ಏನಿದೆ?
ಕುತ್ಕೊಂಡು ಅವನೇ ಹೊಡೆದಿರೋದು ಬೇರೆ ಕಸ್ಟಮರ್ ಗೆ.  **** ಮತ್ತೆ ದರ್ಶನ್ ಒಂದು ರೂಮ್. ಇನ್ನೂ ಅವರಿಗೇನೆ ಊಟ ಹಾಕಿರೋದು ಇವ್ನು. ಈ ಬೃಹಸ್ಪತಿಗಳು ಇವರೇ 15 ಜನ. ನಾನು ಬಂದು ಬೈದಿದ್ದು ಅವರಿಗೇನೆ. ಅಲ್ಲರೀ 15 ಜನ ಒಬ್ಬನನ್ನು ಹೊಡೀತಿದ್ರೆ ನೀನು ನೋಡ್ಕೊಂಡು ನಿಂತಿದ್ಯಲ್ಲಾ ಹರ್ಷ ಅಂತ ಕೇಳ್ದೆ. ಅವನು ಅಣ್ಣ ಅಣ್ಣ ಅಂತ ಕಾಲು ಕಟ್ಬಿಟ್ಟ.

ನಿನ್ನ ಜೊತೆ ಇರೋರು ಯಾರೂ ಒಳ್ಳೇಯವರಲ್ಲ ಅಂತ ನಿನ್ನೆ ಹೇಳ್ದೆ. ಅಲ್ಲ ತಲೆ ಕಡೀತಿನಿ. ಬಡೀತಿನಿ ಅಂತ ಹೋದ್ನಲ್ಲ ಪ್ರೆಸ್‍ಗೆ. ಇದೆಲ್ಲಾ ಶಾಶ್ವತ ಅಲ್ಲ ದರ್ಶನ್. ತಪ್ಪು ನೀನು ಹೇಳಿರೋದು. ಅವರೂ ಒಳ್ಳೆಯವರಲ್ಲ ನಿನ್ ಜೊತೆ ಇರೋರು.

ಉಮಾಪತಿ ಬಗ್ಗೆನೂ ನಿಂಗೆ ಗೊತ್ತು. ನಾನು ಬೇರೆ ಪ್ರೊಡ್ಯೂಸರ್ ಬಗ್ಗೆ ಮಾತಾಡ್ಬಾರ್ದು. ಪೊಲೀಸ್ ತನಿಖೆಯಲ್ಲಿ ನೀನೂ ತಗ್ಲಾಕ್ಕೊತೀಯ. ನನಗೆ ಬೇರೆ ಮಾಹಿತಿನೇ ಬಂದಿದೆ. ಪೊಲೀಸರು ನೋಡಿ ಸರ್. ಅವರು ಸೆಲೆಬ್ರಿಟಿಗಳು ನಾವೇನು ಮಾಡಲು ಆಗಲ್ಲ. ನಿಮ್ಮ ಫ್ರೆಂಡ್ ಕೂಡ ಬರಬೇಕಾಗುತ್ತೆ ಅಂದ್ರು. ಇದನ್ನೂ ಓದಿ: ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್

ದರ್ಶನ್‍ಗೆ ಇದನ್ನೇ ಹೇಳ್ದೆ. ನೀನು ತೋಟಕ್ಕೆ ಬಾ. ತೋಟಕ್ಕೆ ಬಾ ಅಂದ. ನಾವ್ ಸೀನ್‍ಗೂ ಇಲ್ಲ. ಬರೋದೂ ಇಲ್ಲ ಅಂದೆ. ಅವ್ನು ಫೋನ್ ಮಾಡಿದ್ದ. ಅಂದ್ರೆ ಅಪ್ಪ ಕೆಂಡಾಮಂಡಲರಾಗ್ಬಿಟ್ರು. ಏಯ್. ಬಂದ್‍ಗಿಂದ್ ಬಿಟ್ಟೋನು ತಿರ್ಗಾ. ದಯವಿಟ್ಟು ಬೇಡಪ್ಪ.. ಅವ್ನು ತಪ್ಪು ಮಾಡಿರೋದು ಅವ್ನಿಗೆ ಗಿಲ್ಟಿ ಇರಲಿ. ಮತ್ತೆ ನೀನೇನಾದ್ರೂ ಕರ್ಕೊಂಡೆ ಸ್ಟಾಪ್ ಬಳಿಯೂ ಬೆಲೆ ಇರಲ್ಲ. ಗಾಂಧಿನಗರದಲ್ಲೂ ಬೆಲೆ ಇರಲ್ಲ.

ಅವನದ್ದು ಸಾವಿರ ಇದೆ. ನಿಮಿಷಕ್ಕೆ ಒಂದು ಹೊರ ಬರ್ತಾವೆ. ಆ ಹುಡುಗಿಗೂ ಅವಮಾನ. ನಿಮ್ಮಿಬ್ರದ್ದು ಏನಾಗಿದೆ ಅಂತಾನೆ ಗೊತ್ತಿಲ್ಲ. ಅವನ ಮನೆ ಹಾಳಾದ್ರೆ ಸುಮ್ಮನಿರ್ತಾನಾ? ಅವನು ನಿಂದನ್ನೂ ಬಿಡ್ತಾನೆ. ತಲೆ ಕತ್ತರಿಸುತ್ತೇನೆ ಅಂತೀಯಾ ಅದು ನಿನಗೆ ಬೇಕಾ? ನಮ್ಮ ಹೋಟೆಲಿನಲ್ಲಿ ಜಗಳ ಆದಾಗ ಹರ್ಷ ರಾಕೇಶ್ ಪಾಪಣ್ಣ ಎಲ್ಲರೂ ನೋಡ್ತಾ ಇದ್ರು.

Comments

Leave a Reply

Your email address will not be published. Required fields are marked *