ಈಜಲು ಹೋದ ಯುವಕ ನೀರು ಪಾಲು

ಮಂಡ್ಯ: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್‍ನಲ್ಲಿ ಜರುಗಿದೆ.

ಬೆಂಗಳೂರು ಮೂಲದ ಯುವಕ ವಿಶಾಲ್ ವರ್ಗೀಸ್ ಜಾರ್ಜ್ (24) ಮೃತ ಯುವಕ. ವಿಶಾಲ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ತನ್ನ ನಾಲ್ವರು ಸ್ನೇಹಿತರೊಂದಿಗೆ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಪ್ರವಾಸಕ್ಕೆಂದು ಬಂದಿದ್ದಾನೆ. ಈ ಸಂದರ್ಭದಲ್ಲಿ ಮಳವಳ್ಳಿ ಸಮೀಪದ ಗಾಣಾಳು ಫಾಲ್ಸ್‍ಗೆ ಬಂದಿದ್ದಾರೆ.

ಈ ವೇಳೆ ವಿಶಾಲ್ ಹಾಗೂ ಇತರ ಸ್ನೇಹಿತರು ಈಜಲು ಮುಂದಾಗಿದ್ದಾರೆ. ಆಗ ಈಜಲು ಸಾಧ್ಯವಾಗದೆ ವಿಶಾಲ್ ನೀರಿನಲ್ಲಿ ಮುಳುಗಿದ್ದಾರೆ. ಜೊತೆಯಲ್ಲಿ ಬಂದಿದ್ದ ಸ್ನೇಹಿತರು ಕಾಪಾಡುವಷ್ಟರಲ್ಲಿ ವಿಶಾಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪೊಲೀಸಪ್ಪನ ಕೈ ಕಚ್ಚಿದ ಮಹಿಳೆ

Comments

Leave a Reply

Your email address will not be published. Required fields are marked *