ಇಷ್ಟು ಕೆಟ್ಟ ಪ್ರಧಾನಿ, ಗೃಹ ಸಚಿವರನ್ನ ನೋಡಿಯೇ ಇಲ್ಲ: ದೀದಿ ವಾಗ್ದಾಳಿ

– ನಾನಾಗಿಯೇ ಹಿಂದೆ ಸರಿಯೋವರೆಗೂ ನನ್ನನ್ನ ಹಿಂದಿಕ್ಕಲು ಸಾಧ್ಯ ಇಲ್ಲ

ಕೋಲ್ಕತ್ತಾ: ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕೆಟ್ಟ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರನ್ನ ನೋಡಿಲ್ಲ ಎಂದು ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣಕಣ ದಿನದಿಂದ ದಿನಕ್ಕೆ ಅಬ್ಬರ ಪಡೆದುಕೊಳ್ಳುತ್ತಿದೆ.

ಹೂಗ್ಲಿಯ ಫುರೂಶುರಾ ಸಮಾವೇಶದಲ್ಲಿ ಭಾಗಿಯಾಗಿದ್ದ ಮಮತಾ ಬ್ಯಾನರ್ಜಿ, ಆರಂಭದಿಂದಲೂ ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಏಳು ಬಾರಿ ಸಂಸದೆಯಾಗಿದ್ದೇನೆ. ರಾಜಕೀಯ ಜೀವನದಲ್ಲಿ ಹಲವು ಪ್ರಧಾನಿಗಳು ಮತ್ತ ಸಚಿವರನ್ನ ಕಂಡಿದ್ದೇನೆ. ಆದ್ರೆ ಎಂದೂ ಇಷ್ಟು ಕೆಟ್ಟ ಸರ್ಕಾರವನ್ನ ನೋಡಿರಲಿಲ್ಲ.

ಕೊಲೆ ಮಾಡುವ, ಸುಳ್ಳು ಹೇಳುವವರು ಬಂಗಾಳಕ್ಕೆ ಬಂದಿದ್ದಾರೆ. ಬಂಗಾಳದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬದಲಾವಣೆಗಾಗಿ ಬಂದಿದ್ದೇವೆ ಎಂದು ಸಾಲು ಸಾಲು ಸುಳ್ಳುಗಳನ್ನ ಹೇಳಿ ಮತ ಕೇಳುತ್ತಿದ್ದಾರೆ. ಎಲ್ಲಯವರೆಗೂ ನಾನೇ ಹಿಂದೆ ಸರಿಯಲ್ಲವೋ, ಅಲ್ಲಿಯವರೆಗೂ ನನ್ನ ಹಿಂದಿಕ್ಕಿಲು ಸಾಧ್ಯವಿಲ್ಲ ಎಂದು ಗುಡುಗಿದರು.

ಟಿಎಂಸಿ ಮತ್ತು ಸಿಪಿಐಎಂ ತೊರೆದು ಬಿಜೆಪಿ ಸೇರಿದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ನಮ್ಮಲ್ಲಿಯ ಕೆಲ ಮೀರ್ ಜಾಫರ್ ಗಳು ಬಿಜೆಪಿಗೆ ಹೋದರು. ಅವರಿಗೆ ಸುಳ್ಳು ಹೇಳೋದು ಹೊರತಾಗಿ ಏನೂ ಗೊತ್ತಿಲ್ಲ. ಗೃಹ ಸಚಿವರು ಟಿಎಂಸಿ ದೇಶ ದ್ರೋಹಿಯಾಗಿದ್ದು, ದೇಶದ ಬಗ್ಗೆ ಪ್ರೀತಿ ಹೊಂದಿಲ್ಲ ಅಂತ ಆರೋಪಿಸುತ್ತಾರೆ. ಗೃಹ ಸಚಿವರೇ ನೀವು ದೆಹಲಿಯಲ್ಲ ಎಷ್ಟು ಜನರನ್ನು ಕೊಲೆ ಮಾಡಿದ್ರಿ? ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಎಷ್ಟು ಸಾವನ್ನಪ್ಪಿದ್ರು. ನೀವು ದೇಶಪ್ರೇಮಿಗಳು ನಾವು ದೇಶದ್ರೋಹಿಗಳಾ ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಹೂಗ್ಲಿಯ ಸಮಾವೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್, ಕಾಶ್ಮೀರದಲ್ಲಿದ್ದ ಗೂಂಡಾ ರಾಜಕಾರಣದ ಬಂಗಾಳದಲ್ಲಿದೆ. ಈಗ ಕಾಶ್ಮೀರ ಶಾಂತವಾಗಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬಂಗಾಳದ ಶಾಂತಿಗಾಗಿ ಬಿಜೆಪಿ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *