ಇಷ್ಟವಿಲ್ಲದಿದ್ರೂ ಮದ್ವೆ ಮಾಡಿದ ಪೋಷಕರು- ಪ್ರಿಯಕರನೊಂದಿಗೆ ವಿವಾಹಿತೆ ಆತ್ಮಹತ್ಯೆ

ಕೋಲಾರ: ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮುಗಿಲಬೆಲೆ ಗ್ರಾಮದಲ್ಲಿ ನಡೆದಿದೆ.

ಮಾದ ಮಂಗಲ ಗ್ರಾಮದ ಸುರೇಶ್(28) ಹಾಗೂ ಕಾರಹಳ್ಳಿ ರೂಪ (26) ಮೃತ ಪ್ರೇಮಿಗಳು. ಇಷ್ಟವಿಲ್ಲದಿದ್ದರೂ ಮನೆಯವರು ರೂಪಾಗೆ ಮದುವೆ ಮಾಡಿದ ಕಾರಣ ಪ್ರೇಮಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ರೂಪಾಗೆ ಎರಡು ತಿಂಗಳ ಹಿಂದೆಯಷ್ಟೆ ಮತ್ತೊರ್ವನೊಂದಿಗೆ ವಿವಾಹ ವಾಗಿತ್ತು. ಆದರೆ ಈ ಮದುವೆ ರೂಪಾಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಆದರೂ ಪೋಷಕರು ಒತ್ತಾಯದ ಮೇರೆಗೆ ರೂಪಾಗೆ ಬೇರೊಬ್ಬನ ಜೊತೆ ವಿವಾಹ ಮಾಡಿಯೇ ಬಿಟ್ಟರು. ಇದರಿಂದ ನೊಂದು ರೂಪಾ ಹಾಗೂ ಆಕೆಯ ಪ್ರಿಯಕರ ವೇಲ್ ನಲ್ಲಿ ಸುತ್ತಿಕೊಂಡು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೊಡಲಿಯಿಂದ ಕೊಚ್ಚಿ ಪತ್ನಿಯ ಕೊಲೆ- ಹೊಡೆತದ ರಭಸಕ್ಕೆ ತಲೆಯಲ್ಲೇ ಸಿಕ್ಕಿಕೊಂಡ ಕೊಡಲಿ! 

Comments

Leave a Reply

Your email address will not be published. Required fields are marked *