ಇನ್ಮುಂದೆ ಅರವಿಂದ್‍ಗೆ ನೀರು ಕುಡಿಸೋದು ದಿವ್ಯಾ

ಬಿಗ್‍ಬಾಸ್ ಮನೆಯ ಕ್ಯೂಟ್ ಕಪಲ್ ಎಂದೆ ಸುದ್ದಿಯಾಗಿರುವ ದಿವ್ಯಾ ಮತ್ತು ಅರವಿಂದ್ ಒಂದಲ್ಲಾ ಒಂದು ವಿಚಾರವಾಗಿ ಪ್ರತಿನಿತ್ಯ ಸುದ್ದಿಯಲ್ಲಿರುತ್ತಾರೆ. ಇದೀಗ ಒಂದು ಫನ್ನಿ ವಿಚಾರವಾಗಿ ಈ ಜೋಡಿ ಸುದ್ದಿಯಲ್ಲಿದೆ.

ಬಿಗ್‍ಬಾಸ್ ಮನೆಯಲ್ಲಿ ಕೆಲವು ನಿಮಯಗಳಿವೆ ಅವುಗಳನ್ನು ಸ್ಪರ್ಧಿಗಳು ಪಾಲಿಸಬೇಕು. ರೂಲ್ಸ್ ಬ್ರೇಕ್ ಆದರೆ ಬಿಗ್‍ಬಾಸ್ ನೀಡುವ ಶಿಕ್ಷೆಯನ್ನು ಅನುಭವಿಸಬೇಕಾಗಿರುತ್ತದೆ. ಇದೀಗ ಅರವಿಂದ್‍ಗೆ ಬಿಗ್‍ಬಾಸ್ ನೀಡಿರುವ ಶಿಕ್ಷೆ ಸಖತ್ ಖುಷಿ ತಂದಿದ್ದು ಖಂಡಿತಾ ಹೌದು.

ಅರವಿಂದ್ ಗ್ಲಾಸ್ ತೊಳೆದು ಇಡುವಾಗ ಕೈ ಜಾರಿ ಬಿದ್ದಿತ್ತು. ಇದಕ್ಕೆ ಶಿಕ್ಷೆಯಾಗಿ ಒಂದು ಚಿಕ್ಕ ಗ್ಲಾಸ್ ಅನ್ನು ಮನೆಗೆ ಬಿಗ್‍ಬಾಸ್ ಕಳುಹಿಸಿಕೊಟ್ಟಿದ್ದರು. ಮನೆಯ ಸ್ಪರ್ಧಿಗಳಿಗೆ ಯಾಕೆ ಎಂದು ಕೇಳಿದರು. ಪಶ್ಚಾತಾಪ ಪಡುವವರು ನೀರು, ಟೀ ಕುಡಿಯಲು ಇರಬಹುದು ಎಂದು ಪ್ರಶಾಂತ್ ಹೇಳಿದ್ದಾರೆ. ಈ ವೇಳೆ ಅರವಿಂದ್ ಅವರನ್ನು ಬಿಗ್‍ಬಾಸ್ ಯಾಕೆ ಕಪ್ ಕಳಿಸಿರ ಬಹುದು ಎಂದು ಹೇಳುತ್ತಿರಾ ಎಂದಿದ್ದಾರೆ. ಈ ವೇಳೆ ಅರವಿಂದ್ ನನಗಾಗಿ ಬಂದಿದೆ. ಯಾಕೆ ಅಂದ್ರೆ ನಾನು ಕಪ್ ಒಡೆದಿದ್ದೇನೆ ಎಂದು ಹೇಳಿದ್ದಾರೆ.

ಅರವಿಂದ್‍ಗಾಗಿ ಬಂತು ಸ್ಪೆಷಲ್ ಕಪ್

ಅರವಿಂದ್ ಮುಂದಿನ ಆದೇಶದವರೆಗೆ ನೀವು ಈ ಕಪ್‍ನಲ್ಲಿಯೇ ನೀರು, ಬಿಸಿ ನೀರು ಕುಡಿಯಬೇಕು ಎಂದು ಬಿಗ್‍ಬಾಸ್ ಹೇಳಿದ್ದಾರೆ. ಆಗ ಅರವಿಂದ್ ನಗುತ್ತಾ ಕಪ್ ಎತ್ತಿಕೊಂಡಿದ್ದಾರೆ. ದಿವ್ಯಾ ಉರುಡುಗ ಅರವಿಂದ್‍ಗೆ ನೀರು ಬೇಕು ಎಂದು ಅನ್ನಿಸಿದಾಗ ನೀವೇ ಕುಡಿಸುತ್ತಿರಾ ಎಂದು ಕೇಳಿದ್ದಾರೆ. ಈ ವೇಳೆ ದಿವ್ಯಾ ಕೂಡಾ ನೀರನ್ನು ಕುಡಿಸಲು ಒಪ್ಪಿಕೊಂಡಿದ್ದಾರೆ.

ಬಿಗ್‍ಬಾಸ್ ಅರವಿಂದ್‍ಗೆ ನೀಡಿರುವ ಶಿಕ್ಷಗೆ ಇಂತಹಾ ಶಿಕ್ಷೆಯನ್ನು ನಾವು ನೋಡಿರಲಿಲ್ಲ ಎಂದು ಸಂಬರ್ಗಿ ಹೇಳಿದ್ದಾರೆ. ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಹೇಳಿದ್ದು ಹಾಲು ಅನ್ನ ಎಂದು ರಾಜೀವ್ ಜೋರಾಗಿ ಹೇಳಿದ್ದಾರೆ. ಈ ವೇಳೆ ಮನೆಮಂದಿ ಜೋರಾಗಿ ನಕ್ಕಿದ್ದಾರೆ. ದಿವ್ಯಾ ಕೂಡಾ ಅರವಿಂದ್‍ಗೆ ನೀರನ್ನು ಚಿಕ್ಕ ಕಪ್‍ನಲ್ಲಿ ಕುಡಿಸಿದ್ದಾರೆ.

Comments

Leave a Reply

Your email address will not be published. Required fields are marked *