ಇಂದು 23,558 ಜನಕ್ಕೆ ಕೊರೊನಾ, 116 ಸಾವು – ತುಮಕೂರು 1,176, ಮೈಸೂರು 979 ಪಾಸಿಟಿವ್

– ಬೆಂಗಳೂರಿನಲ್ಲಿ 13,640 ಪಾಸಿಟಿವ್, 70 ಬಲಿ
– ಐಸಿಯುನಲ್ಲಿ 904 ಸೋಂಕಿತರು

ಬೆಂಗಳೂರು: ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ ಮರಣ ರೌದ್ರ ನರ್ತನ ಮುಂದುವರಿದಿದ್ದು, ಇಂದು 23,558 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 116 ಜನರು ಕೊರೊನಾಗೆ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 13,762ಕ್ಕೆ ಏರಿಕೆಯಾಗಿದೆ.

ಇತ್ತ ರಾಜಧಾನಿ ಬೆಂಗಳೂರು ಸ್ಥಿತಿ ಕ್ಷಣ ಕ್ಷಣಕ್ಕೂ ಭಯಾನಕವಾಗುತ್ತಿದ್ದು, ಇಂದು 13,460 ಜನರ ದೇಹವನ್ನ ಕೋವಿಡ್ ಹೊಕ್ಕಿದೆ. ಕೊರೊನಾಗೆ ಬೆಂಗಳೂರು ನಗರದಲ್ಲಿ ಇಂದು ಬರೋಬ್ಬರಿ 70 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜಧಾನಿಯಲ್ಲಿ 1,24,894 ಸಕ್ರಿಯ ಪ್ರಕರಣಗಳಿದ್ದು, ಬೆಡ್ ಮತ್ತು ಆಕ್ಸಿಜನ್ ಕೊರತೆ ಉಂಟಾಗಿದೆ.

ರಾಜ್ಯದಲ್ಲಿ 1,76,188 ಸಕ್ರಿಯ ಪ್ರಕರಣಗಳಿದ್ದು, 904 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 12,22,202ಕ್ಕೆ ಏರಿಕೆಯಾಗಿದೆ. ಇಂದು 6,412 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.15.47 ಮತ್ತು ಮರಣ ಪ್ರಮಾಣ ಶೇ.0.49ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 153, ಬಳ್ಳಾರಿ 792, ಬೆಳಗಾವಿ 301, ಬೆಂಗಳೂರು ಗ್ರಾಮಾಂತರ 544, ಬೆಂಗಳೂರು ನಗರ 13,640, ಬೀದರ್ 202, ಚಾಮರಾಜನಗರ 170, ಚಿಕ್ಕಬಳ್ಳಾಪುರ 221, ಚಿಕ್ಕಮಗಳೂರು 198, ಚಿತ್ರದುರ್ಗ 118, ದಕ್ಷಿಣ ಕನ್ನಡ 401, ದಾವಣಗೆರೆ 200, ಧಾರವಾಡ 379, ಗದಗ 72, ಹಾಸನ 445, ಹಾವೇರಿ 27, ಕಲಬುರಗಿ 757, ಕೊಡಗು 141, ಕೋಲಾರ 369, ಕೊಪ್ಪಳ 133, ಮಂಡ್ಯ 492, ಮೈಸೂರು 975, ರಾಯಚೂರು 220, ರಾಮನಗರ 90, ಶಿವಮೊಗ್ಗ 266, ತುಮಕೂರು 1,176, ಉಡುಪಿ 471, ಉತ್ತರ ಕನ್ನಡ 171, ವಿಜಯಪುರ ಮತ್ತು 335 ಯಾದಗಿರಿಯಲ್ಲಿ 99 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Comments

Leave a Reply

Your email address will not be published. Required fields are marked *