ಇಂದು ಹಸೆಮಣೆ ಏರಬೇಕಿದ್ದ ಯುವಕ ಕೊರೊನಾ ಸಾವಿನ ಮನೆ ಸೇರಿದ!

ಕಾರವಾರ: ಇಂದು ಹಸೆಮಣೆ ಏರಬೇಕಿದ್ದ 32 ವರ್ಷದ ಯುವಕನನ್ನ ಡಾಕಿಣಿ ಕೊರೊನಾ ಬಲಿ ಪಡೆದುಕೊಂಡಿದೆ.

ಕಾರವಾರದ ನಂದನಗದ್ದಾ ನಿವಾಸಿ ರೋಶನ್ ಪಡುವಳಕರ್ ಸಾವನ್ನಪ್ಪಿದ ಯುವಕ. ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರೋಶನ್ ಕೆಲ ದಿನಗಳ ಹಿಂದೆ ಕಾರವಾರಕ್ಕೆ ಬಂದಿದ್ದರು. ಒಂದು ವಾರದ ಹಿಂದೆ ಅನಾರೋಗ್ಯ ತುತ್ತಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಕುಟುಂಸ್ಥರು ಮದುವೆಯನ್ನು ಮುಂದೂಡಿದ್ದರು.

ಎರಡು ದಿನಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದ್ರೆ ಸೋಮವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಗದೇ ರೋಶನ್ ಸಾವನ್ನಪ್ಪಿದ್ದಾರೆ. ಎಲ್ಲವೂ ಸರಿ ಇದ್ದಿದ್ರೆ ಇಂದು ರೋಶನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರು.

Comments

Leave a Reply

Your email address will not be published. Required fields are marked *