ಇಂದಿನಿಂದ ಮೇ 15ರ ವರೆಗೆ ಪಾಸಿಟಿವಿಟಿ ಅನ್‍ಲಿಮಿಟೆಡ್ ಉಪನ್ಯಾಸ

ಬೆಂಗಳೂರು: ನಾವು ಗೆದ್ದೇ ಗೆಲ್ಲುತ್ತೇವೆ ಕೋವಿಡ್ ರೆಸ್ಪಾನ್ಸ್ ಟೀಮ್ ವತಿಯಿಂದ ‘ಪಾಸಿಟಿವಿಟಿ ಅನ್‍ಲಿಮಿಟೆಡ್’ ಕುರಿತು ಉಪನ್ಯಾಸ ಮಾಲಿಕೆ ಏರ್ಪಡಿಸಿದ್ದು, ಸಂವಾದ ಸಾಮಾಜಿಕ ಜಾಲತಾಣದ ವಾಹಿನಿ ಮೂಲಕ ಶ್ರೀ ಜಗ್ಗಿ ವಾಸುದೇವ್ ಹಾಗೂ ಜೈನ ಮುನಿ ಶ್ರೀ ಪ್ರಮಾಣ ಸಾಗರ ಜೀ ಮಹಾರಾಜ್ ಉಪನ್ಯಾಸ ನೀಡಲಿದ್ದಾರೆ.

ಮೇ 11ರಿಂದ 15ರ ವರೆಗೆ ಉಪನ್ಯಾಸ ಮಾಲಿಕೆ ನಡೆಯಲಿದ್ದು, ಇಂದು ಸಂಜೆ 4.30ಕ್ಕೆ ಆರಂಭವಾಗಲಿದೆ. ಸದ್ಗುರು ಶ್ರೀ ಜಗ್ಗಿ ವಾಸುದೇವ್ ಹಾಗೂ ಜೈನ ಮುನಿ ಶ್ರೀ ಪ್ರಮಾಣ ಸಾಗರ ಜೀ ಮಹಾರಾಜ್ ಅವರು ಉಪನ್ಯಾಸ ನೀಡಲಿದ್ದಾರೆ.

ಕೊರೊನಾ ಕಾಲದಲ್ಲಿ ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ 5 ದಿನಗಳ ಕಾಲ ಉಪನ್ಯಾಸ ನೀಡಲಿದ್ದಾರೆ. ಸಂವಾದ ಸಾಮಾಜಿಕ ಜಾಲತಾಣದ ವಾಹಿನಿ ಮೂಲಕ ಉಪನ್ಯಾಸವನ್ನು ಕೇಳಬಹುದಾಗಿದೆ.

Comments

Leave a Reply

Your email address will not be published. Required fields are marked *