ಆಸ್ಪತ್ರೆಗೆ ಭೇಟಿ ನೀಡಿದ ಎಚ್.ಕೆ ಪಾಟೀಲ್ – ಸರ್ಕಾರದ ವಿರುದ್ಧ ಗರಂ

ಗದಗ: ಕಾಂಗ್ರೆಸ್‍ನ ಹಿರಿಯ ಶಾಸಕ, ಮಾಜಿ ಸಚಿವ ಎಚ್.ಕೆ ಪಾಟೀಲ್ ಇಂದು ನಗರದ  ಜಿಮ್ಸ್‌ನ  ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಕೋವಿಡ್ ವಿಷಯದಲ್ಲಿನ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಆಕ್ಸಿಜನ್, ಬೆಡ್ ಕೊರತೆ ತುಂಬಾನೆ ಎದುರಾಗಲಿದೆ ಸರ್ಕಾರ ಜಾಗೃತವಾಗಿರಲಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರ ಜೀವದ ಜೊತೆಗೆ ಸರ್ಕಾರ ಚೆಲ್ಲಾಟ ಆಡುತ್ತಿದೆಯಾ? ಹೆಣಗಳ ಸಾಲು ಇದೆ. ಆಕ್ಸಿಜನ್‍ಗಾಗಿ ಬಾಯಿ ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಕೆಳಮಟ್ಟದ ಮಾತುಗಳನ್ನಾಡಲು ನಾಚಿಕೆ ಆಗಲ್ವಾ? ವಿಧಾನ ಸಭೆಯಲ್ಲಿ ದಾಖಲಾತಿಗಳಿವೆ ನೋಡಿ, ಟಿವಿ, ಪತ್ರಿಕೆ ನೋಡಿ ಎಚ್ಚರವಾಗುತ್ತೆ ಎಂದು ತಿರುಗೇಟು ನೀಡಿದರು.

ಆಕ್ಸಿಜನ್, ಬೆಡ್ ಬಗ್ಗೆ ಎಚ್ಚರ ವಹಿಸದಿದ್ದರೆ ಕರ್ನಾಟಕ 2ನೇ ಡೆಲ್ಲಿ ಆಗಲಿದೆ. ಸರ್ಕಾರ ಜಾಗೃತಿಯಿಂದ, ಜಾಗರೂಕರಾಗಿ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಆರೋಗ್ಯದ ಕಿವಿ ಮಾತು ಹೇಳಿದರು.

ಈ ವೇಳೆ ಜಿಮ್ಸ್ ನಿರ್ದೇಶಕ ಪಿ.ಎಸ್ ಭೂಸರೆಡ್ಡಿ, ಸರ್ಜನ್ ಜಿ.ಎಸ್ ಪಲ್ಲೆದ್ ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಆಸ್ಪತ್ರೆ ವಸ್ತು ಸ್ಥಿತಿಯ ಮಾಹಿತಿ ಪಡೆದರು. ಇದೇ ವೇಳೆ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವು ಸೋಂಕಿತರೊಂದಿಗೆ ಫೋನ್‍ನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು.

Comments

Leave a Reply

Your email address will not be published. Required fields are marked *