ಆರ್.ಆರ್.ನಗರ ಕುರುಕ್ಷೇತ್ರಕ್ಕೆ ಇಂದು ಸಿಎಂ ಬಿಎಸ್‍ವೈ ಎಂಟ್ರಿ

– 9 ವಾರ್ಡ್‍ಗಳಲ್ಲಿ ಸಿಎಂ ರೋಡ್‍ಶೋ

ಬೆಂಗಳೂರು: ಉಪಚುನಾವಣೆಯ ಅಖಾಡದಲ್ಲಿ ನಿನ್ನೆ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರ ಪ್ರಚಾರ ಮಾಡಿದ್ದರು. ಇಂದು ಕ್ಷೇತ್ರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಚಾರ ನಡೆಸಲಿದ್ದು, 9 ವಾರ್ಡ್‍ಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಅಷ್ಟೇ ಬಾಕಿ ಇದ್ದು, ಇಂದು ರಾಜಾಹುಲಿ ಮತಬೇಟೆ ಮಾಡಲಿದ್ದಾರೆ. ಜೆ.ಪಿ ಪಾರ್ಕ್, ಯಶವಂತಪುರ, ಕೊಟ್ಟಿಗೆಪಾಳ್ಯ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಲಗ್ಗೆರೆ, ಲಕ್ಷ್ಮೀದೇವಿನಗರ, ಹೆಚ್‍ಎಂಟಿ, ಜಾಲಹಳ್ಳಿ ಸೇರಿದಂತೆ 9 ವಾರ್ಡ್‍ಗಳಲ್ಲಿ ರೋಡ್ ಶೋ ನಡೆಲಿದೆ. ರೋಡ್ ಶೋಗೂ ಮುನ್ನ ವರ್ಚುಯಲ್ ರ‍್ಯಾಲಿ ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ.

ಎಲ್ಲೆಲ್ಲಿ ಪ್ರಚಾರ?
ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೂ ಆರ್.ಆರ್ ನಗರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದು, ಬೆಳಗ್ಗೆ 10.30 ರಿಂದ ಮ.12.30 ಜ್ಞಾನಭಾರತಿ ವಾರ್ಡ್, ಮ.12.30 ರಿಂದ ಮ.1 ಗಂಟೆ ಕೊಟ್ಟಿಗೆಪಾಳ್ಯ ವಾರ್ಡ್, ಮ.2ಗಂಟೆ ರಿಂದ ಮ.2.30 ಲಗ್ಗೆರೆ ವಾರ್ಡ್, ಮ.2.30 ರಿಂದ ಮ.3ಗಂಟೆ ಲಕ್ಷ್ಮೀದೇವಿ ನಗರ, ಮ.3ಗಂಟೆ ರಿಂದ ಮ.3.30 ಹೆಚ್‍ಎಂಟಿ ವಾರ್ಡ್, ಮ.3.30 ರಿಂದ ಮ.3.45 ಜಾಲಹಳ್ಳಿ ವಾರ್ಡ್, ಸ.4ಗಂಟೆ ರಿಂದ ಸ.5.30 ಜೆಪಿಪಾರ್ಕ್ ಮತ್ತು ಯಶವಂತಪುರ ವಾರ್ಡ್ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

Comments

Leave a Reply

Your email address will not be published. Required fields are marked *